‘ನಂತರ ಡಿ.ಜೆ ನಿಲ್ಲಿಸಿ, ಸಂಗೀತ ಉಪಕರಣಗಳು ಹಾಗೂ ಪಬ್ನ ಪರವಾನಗಿ ಪ್ರತಿಯನ್ನು ಜಪ್ತಿ ಮಾಡಿದೆವು. ಪಬ್ನ ಪರವಾನಗಿದಾರರಾದ ರಾಜ್ಗೋಪಾಲ್, ಎಂ.ನಾರಾಯಣ್ಗೌಡ, ನಾಗೇಂದ್ರಗೌಡ ಹಾಗೂ ಪಾರ್ಟಿ ಆಯೋಜಕರ ವಿರುದ್ಧ ಅಬಕಾರಿ ಕಾಯ್ದೆ ಹಾಗೂ ಪೊಲೀಸ್ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಅವರ ಪೋಷಕರಿಗೂ ಕರೆ ಮಾಡಿ ಮಕ್ಕಳಿಗೆ ಬುದ್ಧಿ ಹೇಳುವಂತೆ ಸೂಚಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.