‘ಸವಾರ ಮನುಗೆ ಚಾಕು ತೋರಿಸಿದ್ದ ಪವನ್, ಹಣ ನೀಡುವಂತೆ ಬೇಡಿಕೆ ಇರಿಸಿದ್ದ. ತಮ್ಮ ಬಳಿ ಹಣವಿಲ್ಲವೆಂದು ಮನು ಹೇಳಿದ್ದರು. ಮನು ಜೇಬಿನಲ್ಲಿ ಹುಡುಕಾಡಿದ್ದ ಆರೋಪಿ, ಎಟಿಎಂ ಕಾರ್ಡ್ ಹಾಗೂ ₹ 3,500 ನಗದು ಕಿತ್ತುಕೊಂಡಿದ್ದ. ನಂತರ, ಮನು ಅವರನ್ನು ಎಟಿಎಂ ಘಟಕಕ್ಕೆ ಕರೆದೊಯ್ದು ₹ 7,500 ಡ್ರಾ ಮಾಡಿಸಿಕೊಂಡಿದ್ದ. ನಂತರ, ಪೊಲೀಸರಿಗೆ ವಿಷಯ ತಿಳಿಸದಂತೆ ಬೆದರಿಸಿ ಬಿಟ್ಟು ಕಳುಹಿಸಿದ್ದ’ ಎಂದು ತಿಳಿಸಿವೆ.