‘ಆರೋಪಿ ಗುರುಪ್ರಸಾದ್,ರಿಯಲ್ ಎಸ್ಟೇಟ್ ಏಜೆಂಟ್. ಪ್ರಶಾಂತ್ ರೆಡ್ಡಿ, ವಿಮೆ ಕಂಪನಿಯೊಂದರ ಏಜೆಂಟ್. ಮತ್ತೊಬ್ಬ ಆರೋಪಿ ಸೂರ್ಯ ಪ್ರಕಾಶ್, ಆಟೊ ಚಾಲಕ. ಗೌತಮ್ ರೆಡ್ಡಿ, ನಿರುದ್ಯೋಗಿ. ಈ ನಾಲ್ವರು ಬುಧವಾರ ರಾತ್ರಿ ಕುಂದಲಹಳ್ಳಿ ಗೇಟ್ ಸಮೀಪ ಕಾರು ನಿಲ್ಲಿಸಿಕೊಂಡು ಅಬ್ಬರದ ಸಂಗೀತ ಹಾಕಿಕೊಂಡು ಪಾರ್ಟಿ ಮಾಡುತ್ತಿದ್ದರು. ಸ್ಥಳೀಯರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದರು. ಆ ಬಗ್ಗೆ ನಿವಾಸಿಯೊಬ್ಬರು, ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ಹೇಳಿದರು.