ದ್ವಾರದಲ್ಲಿ ಈ ಮೊದಲು ಸರಸ್ವತಿಯ ಪ್ರತಿಮೆ ಇತ್ತು. ಆ ಪ್ರತಿಮೆಯು ಸ್ವಲ್ಪ ಭಗ್ನಗೊಂಡಿತ್ತು. ಅದರ ಜಾಗದಲ್ಲಿ ಸರಸ್ವತಿಯ ಹೊಸ ಪ್ರತಿಮೆ ಪ್ರತಿಷ್ಠಾಪಿಸಲು ಹಳೆಯದನ್ನು ಕೆಲವು ದಿನಗಳ ಹಿಂದೆ ತೆಗೆಯಲಾಗಿತ್ತು. ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮೆರವಣಿಗೆ ಮೂಲಕ ಬುದ್ಧನ ಪ್ರತಿಮೆಯನ್ನು ತಂದು ಅದೇ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಿದರು. ಇದರಿಂದ ಅಸಮಾಧಾನಗೊಂಡ ಕೆಲವು ವಿದ್ಯಾರ್ಥಿಗಳು ಬುದ್ಧನ ಪ್ರತಿಮೆಯನ್ನು ತೆರವುಗೊಳಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.