ಗಫೂರ್ ಪಾಷಾ ಮತ್ತು ಅಫ್ತಾಬ್ ಪಾಷಾ ಎಂಬುವರು ಏಪ್ರಿಲ್ 27ರಂದು ಸಾವಿಗೀಡಾಗಿದ್ದರು.ಕೂಲಿ ಕಾರ್ಮಿಕರಾಗಿದ್ದ ಅಫ್ತಾಬ್ ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಗಫೂರ್, ಟ್ಯಾನರಿ ರಸ್ತೆಯಲ್ಲಿರುವ ‘ಬಿಸ್ಮಿಲ್ಲಾ ಟೀ’ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಅಂಗಡಿಗೆ ಹೊಂದಿಕೊಂಡಿರುವ ಹಳೇ ಬಾವಿಯನ್ನು ಸ್ವಚ್ಛಗೊಳಿಸಲು ಇಳಿದಾಗ ಇಬ್ಬರೂ ಸಾವಿಗೀಡಾಗಿದ್ದರು. ಜಗದೀಶ ಹಿರೇಮನಿ ಈ ಸ್ಥಳಕ್ಕೆ ಗುರುವಾರ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.