ಎಸ್.ಆರ್.ವಿಶ್ವನಾಥ್ ಮಾತನಾಡಿ, ’ಕಾರ್ಯಕ್ರಮದಲ್ಲಿ 50 ಮಂದಿ ಅಂಗವಿಕಲರಿಗೆ ವಾಹನ, 300 ತಳ್ಳುಗಾಡಿ, 2000 ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ನೋಟ್ಬುಕ್ ಮತ್ತು ಲೇಖನಿ ಸಾಮಗ್ರಿ, ಕಾರ್ಮಿಕ ಇಲಾಖೆಯಿಂದ 1,500 ಮಂದಿಗೆ ಅಗತ್ಯ ವಸ್ತುಗಳು, ಕಾರ್ಮಿಕ ಕಾರ್ಡ್ ವಿತರಿಸಲಾಗಿದೆ. ಕಂದಾಯ ಇಲಾಖೆಯಿಂದ 420 ಮಂದಿಗೆ 94‘ಸಿಸಿ’ ಹಕ್ಕುಪತ್ರ, 165 ಪಿಂಚಣಿ ಆದೇಶಪತ್ರ ಹಾಗೂ 70 ಪಹಣಿ ವಿಸ್ತೀರ್ಣ ತಿದ್ದುಪಡಿ ಆದೇಶಗಳು ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಬಟ್ಟೆ ವಿತರಿಸಲಾಗಿದೆ’ ಎಂದು ಅವರು ತಿಳಿಸಿದರು.