ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕಸ ಸಾಗಿಸುವ ಗುತ್ತಿಗೆದಾರರಿಗೆ ಪಾಲಿಕೆ ಪ್ರತಿ ತಿಂಗಳೂ ಹಣ ಪಾವತಿ ಮಾಡುತ್ತದೆ. ಒಳ್ಳೆಯ ವಾಹನಗಳನ್ನು ಪೂರೈಸುವುದು, ಅದರ ಬಳಕೆಗೆ ತಾಂತ್ರಿಕ ಅರ್ಹತೆಗಳನ್ನು ಕಾಯ್ದುಕೊಳ್ಳುವುದು ಗುತ್ತಿಗೆದಾರರ ಕರ್ತವ್ಯ. ಕಸದ ಲಾರಿ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದು ದುರದೃಷ್ಟಕರ. ಇಂತಹ ಘಟನೆ ಮರುಕಳಿಸದಂತೆ ತಡೆಯಲು ದುಪ್ಪಟ್ಟು ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.