<p><strong>ಬೆಂಗಳೂರು: </strong>1971ರ ಇಂಡೋ ಪಾಕ್ ಯುದ್ಧದ 50 ವರ್ಷದ ಸ್ಮರಣೆಯ ಅಂಗವಾಗಿ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಮಂಗಳವಾರ ನಡೆದ ‘ಸ್ವರ್ಣ ವಿಜಯ ವರ್ಷ’ ಕಾರ್ಯಕ್ರಮದಲ್ಲಿ, ಅಂದು ಯುದ್ದದಲ್ಲಿ ಹೋರಾಡಿ ಪ್ರಶಸ್ತಿ ಪುರಸ್ಕೃತರಾಗಿದ್ದ ಸೇನಾನಿಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸನ್ಮಾನಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ‘ದೇಶದ ಮಣ್ಣಿನ ವೀರ ಸೇನಾನಿಗಳಿಗೆ ಗೌರವ ಅರ್ಪಿಸುವ ಸುಸಂದರ್ಭವಿದು’ ಎಂದರು.</p>.<p>‘ಯುದ್ದದಲ್ಲಿ ಭಾರತ ಜಯಿಸಿ 50 ವರ್ಷ ತುಂಬಿದೆ. ಆ ಸ್ಮರಣೆಯ ಆಚರಣೆಗೆ ಪ್ರಧಾನಿ ಕಳೆದ ಡಿ. 16 ರಂದು ಚಾಲನೆ ನೀಡಿದ್ದಾರೆ. ಈ ವಿಜಯ ದೀಪವು ರಾಜ್ಯದಲ್ಲಿ ಮಾರ್ಚ್ 5ರವರೆಗೆ ಇರಲಿದೆ. ದೇಶದಲ್ಲಿ ವರ್ಷವಿಡೀ ಸ್ವರ್ಣ ವಿಜಯ ವರ್ಷಾಚರಣೆ ನಡೆಯಲಿದೆ’ ಎಂದರು.</p>.<p>ಯುದ್ಧದಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕಮಾಂಡರ್ ಜೆಪಿಎ ನರೋನ್ಹಾ ಬದಲಿಗೆ ಮಹಾವೀರ ಚಕ್ರ ಪಡೆದಿದ್ದ ಅವರ ಪತ್ನಿ ತೆರೇಸಾ ನರೋನ್ಹಾ, ನೌಕಾಪಡೆ ಅಡ್ಮಿರಲ್ ಸಂತೋಷ್ ಕುಮಾರ್ ಗುಪ್ತ ಅವರು ಮಹಾವೀರ ಚಕ್ರ, ಮೇಜರ್ ಜನರಲ್ ಕುಪ್ಪಂದ ಪೊನ್ನಪ್ಪ ನಂಜಪ್ಪ ಅವರು ವೀರಚಕ್ರ, ಬ್ರಿಗೇಡ್ ಪಿ.ವಿ. ಸಹದೇವನ್ ಅವರು ವೀರಚಕ್ರ, ಅಡ್ಮಿರಲ್ ರಿಷಿರಾಜ್ ಸೂದ್ ಅವರು ವೀರಚಕ್ರ, ಲೆಫ್ಟಿನೆಂಟ್ ಕೇಶವ್ ಸಿಂಗ್ ಪನ್ವರ್ ಅವರು ವೀರಚಕ್ರ ವಿಮಾನ ಲೆಫ್ಟಿನೆಂಟ್ ಅಸ್ಪಾರಿ ರಘುನಾಥನ್ ಅವರು ವೀರಚಕ್ರ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದು, ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>1971ರ ಇಂಡೋ ಪಾಕ್ ಯುದ್ಧದ 50 ವರ್ಷದ ಸ್ಮರಣೆಯ ಅಂಗವಾಗಿ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಮಂಗಳವಾರ ನಡೆದ ‘ಸ್ವರ್ಣ ವಿಜಯ ವರ್ಷ’ ಕಾರ್ಯಕ್ರಮದಲ್ಲಿ, ಅಂದು ಯುದ್ದದಲ್ಲಿ ಹೋರಾಡಿ ಪ್ರಶಸ್ತಿ ಪುರಸ್ಕೃತರಾಗಿದ್ದ ಸೇನಾನಿಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸನ್ಮಾನಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ‘ದೇಶದ ಮಣ್ಣಿನ ವೀರ ಸೇನಾನಿಗಳಿಗೆ ಗೌರವ ಅರ್ಪಿಸುವ ಸುಸಂದರ್ಭವಿದು’ ಎಂದರು.</p>.<p>‘ಯುದ್ದದಲ್ಲಿ ಭಾರತ ಜಯಿಸಿ 50 ವರ್ಷ ತುಂಬಿದೆ. ಆ ಸ್ಮರಣೆಯ ಆಚರಣೆಗೆ ಪ್ರಧಾನಿ ಕಳೆದ ಡಿ. 16 ರಂದು ಚಾಲನೆ ನೀಡಿದ್ದಾರೆ. ಈ ವಿಜಯ ದೀಪವು ರಾಜ್ಯದಲ್ಲಿ ಮಾರ್ಚ್ 5ರವರೆಗೆ ಇರಲಿದೆ. ದೇಶದಲ್ಲಿ ವರ್ಷವಿಡೀ ಸ್ವರ್ಣ ವಿಜಯ ವರ್ಷಾಚರಣೆ ನಡೆಯಲಿದೆ’ ಎಂದರು.</p>.<p>ಯುದ್ಧದಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕಮಾಂಡರ್ ಜೆಪಿಎ ನರೋನ್ಹಾ ಬದಲಿಗೆ ಮಹಾವೀರ ಚಕ್ರ ಪಡೆದಿದ್ದ ಅವರ ಪತ್ನಿ ತೆರೇಸಾ ನರೋನ್ಹಾ, ನೌಕಾಪಡೆ ಅಡ್ಮಿರಲ್ ಸಂತೋಷ್ ಕುಮಾರ್ ಗುಪ್ತ ಅವರು ಮಹಾವೀರ ಚಕ್ರ, ಮೇಜರ್ ಜನರಲ್ ಕುಪ್ಪಂದ ಪೊನ್ನಪ್ಪ ನಂಜಪ್ಪ ಅವರು ವೀರಚಕ್ರ, ಬ್ರಿಗೇಡ್ ಪಿ.ವಿ. ಸಹದೇವನ್ ಅವರು ವೀರಚಕ್ರ, ಅಡ್ಮಿರಲ್ ರಿಷಿರಾಜ್ ಸೂದ್ ಅವರು ವೀರಚಕ್ರ, ಲೆಫ್ಟಿನೆಂಟ್ ಕೇಶವ್ ಸಿಂಗ್ ಪನ್ವರ್ ಅವರು ವೀರಚಕ್ರ ವಿಮಾನ ಲೆಫ್ಟಿನೆಂಟ್ ಅಸ್ಪಾರಿ ರಘುನಾಥನ್ ಅವರು ವೀರಚಕ್ರ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದು, ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>