ಕರ್ನಾಟಕ ರಾಜ್ಯ ಲಾರಿ ಮಾಲಿಕರ ಹಾಗೂ ಎಜೆಂಟರ ಸಂಘದ ದಿಢೀರ್ ಕರೆಯಂತೆ ರಾಜ್ಯದಲ್ಲಿ 6,000 ಲಾರಿಗಳ ಮಾಲೀಕರು ಮುಷ್ಕರ ಹೂಡಿದ್ದರು. ಇದರಿಂದ, ಬೆಂಗಳೂರಿನಲ್ಲಿಯೇ 1,100 ಲಾರಿಗಳ ಸಂಚಾರ ಸ್ಥಗಿತಗೊಂಡಿತ್ತು. ನೂರಾರು ಲಾರಿಗಳನ್ನು ಶಾಂತಿನಗರದಲ್ಲಿರುವ ಸಾರಿಗೆ ಆಯುಕ್ತರ ಕಚೇರಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ತಂದು ನಿಲ್ಲಿಸಲಾಗಿತ್ತು. ಇದರಿಂದ ಕೆಂಗಲ್ ಹನುಂತರಾಯ ರಸ್ತೆ, ಬಿಎಂಟಿಸಿ ಎದುರಿನ ರಸ್ತೆ ಸಹಿತ ಸುತ್ತಲಿನ ಎಲ್ಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.