<p>ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದಾದ್ಯಂತ ‘ತಿರಂಗಾ ಯಾತ್ರೆ’ ಕೈಗೊಂಡಿರುವ ಕಾಸರಗೋಡಿನ ಅಮೃತಾ ಜೋಶಿ ನಗರಕ್ಕೆ ಆಗಮಿಸಿದ್ದು, ಅವರನ್ನು ಬಿಬಿಎಂಪಿ ವತಿಯಿಂದ ಸನ್ಮಾನಿಸಲಾಯಿತು.</p>.<p>ನಾಲ್ಕು ತಿಂಗಳಿನಿಂದ 22 ಸಾವಿರ ಕಿ.ಮೀ. ಸಂಚರಿಸುತ್ತಿರುವ ಕನ್ನಡತಿ ಅಮೃತಾ, ‘ಹರ್ ಘರ್ ತಿರಂಗಾ’ ಅಭಿಯಾನದ ಮಹತ್ವವನ್ನು ಜನರಿಗೆ ತಿಳಿಸಲು ಈ ಯಾತ್ರೆ ನಡೆಸುತ್ತಿದ್ದಾರೆ. ಬೆಂಗಳೂರಿಗೆ ಮಂಗಳವಾರ ಬಂದಾಗ, ಬಿಬಿಎಂಪಿ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ವಿಕಾಸ ಟ್ರಸ್ಟ್ನಿಂದ ಸನ್ಮಾನಿಸಲಾಯಿತು.</p>.<p>ರಾಜ್ಕುಮಾರ್ ಗಾಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ಮಾತನಾಡಿ, ’ದೇಶದ ಎಲ್ಲ ಭಾಗಗಳಿಗೆ ಹೋಗಿ ಎಲ್ಲ ಸಂಸ್ಕೃತಿಯನ್ನು ಕಂಡಿದ್ದಾರೆ. ಉತ್ತರ ಭಾರತ ಸೇರಿದಂತೆ ಎಲ್ಲ ಭಾಗಗಳ ಮಹತ್ವವನ್ನೂ ತಿಳಿಸುತ್ತಿರುವುದು ಒಳ್ಳೆಯ ಕೆಲಸ’ ಎಂದು ಶ್ಲಾಘಿಸಿದರು.</p>.<p>‘ಚಿಕ್ಕವಳಿದ್ದಾಗಿನಿಂದ ಮೇಘಾಲಯ ನೋಡಬೇಕೆಂಬ ಆಸೆ ಇತ್ತು. ಕ್ಲಬ್ನವರಿಗೆ ಈ ಬಗ್ಗೆ ತಿಳಿಸಿದಾಗ ಅವರು ಈಶಾನ್ಯ ಭಾರತ ಚೆನ್ನಾಗಿದೆ. ಅಲ್ಲಿ ಪ್ರವಾಸ ಮಾಡಿ ಎಂದು ಹೇಳಿದರು. ನನ್ನ ಪ್ಯಾಷನ್ ಬೈಕ್. ಪ್ರಾಂತೀಯ ತಾರತಮ್ಯದ ವಿಷಯವಾಗಿ ಎಲ್ಲೆಡೆ ಅರಿವು ಮೂಡಿಸುವ ಗುರಿಯೊಂದಿಗೆ ಈ ಸಂಚಾರ ಆರಂಭಿಸಿದೆ’ ಎಂದು ಅಮೃತಾ ತಿಳಿಸಿದರು.</p>.<p>‘ಈಶಾನ್ಯ ಭಾರತದಲ್ಲಿ ಸಂಚಾರ ಮುಗಿಯುವ ವೇಳೆಗೆ ಅಲ್ಲಿನ ಜನರು ತುಂಬಾ ಆಪ್ತರಾದರು. ಅವರು ಎಲ್ಲರಿಗೂ ಸಹಾಯ ಮಾಡುತ್ತಾರೆ. ಅವರ ಪ್ರೀತಿ ಕಂಡಮೇಲೆ 8 ಸಾವಿರ ಕಿ.ಮೀಗೆ ಮುಗಿಸಬೇಕಿದ್ದ ಸಂಚಾರವನ್ನು ವಿಸ್ತರಿಸಿದೆ. ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ ಗಡಿಗಳಲ್ಲೂ ಸಂಚಾರ ಮಾಡಿದೆ. ಬಿಎಸ್ಎಫ್ನವರ ಕರ್ತವ್ಯವನ್ನು ಕಂಡು ಬೆರಗಾದೆ’ ಎಂದರು.</p>.<p>‘ಏಪ್ರಿಲ್ 25ಕ್ಕೆ ಉತ್ತರ ಪ್ರದೇಶದಲ್ಲಿ ಅಪಘಾತವಾಯಿತು. ಹಿಂದಿನಿಂದ ಕಾರ್ ಗುದ್ದಿತು. ಹೀಗಾಗಿ ನಾನು ಒಂದು ತಿಂಗಳು ವಿಶ್ರಾಂತಿ ತೆಗೆದುಕೊಂಡೆ. ಈ ಪ್ರವಾಸವನ್ನು ಮುಗಿಸಲೇಬೇಕು ಎಂದು ಅದೇ ಸ್ಥಳದಿಂದ ಸಂಚಾರ ಆರಂಭಿಸಿದೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಕಡೆಯವರು ಸಹಾಯ ಮಾಡಿದರು. ಇನ್ನೊಂದು ವಾರವಷ್ಟೆ ಸಂಚಾರ ಇದೆ. ಶಿವಮೊಗ್ಗಗೆ ಹೋಗುತ್ತೇನೆ’ ಎಂದು ಹೇಳಿದರು.</p>.<p>ಮಣಿಪಾಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಟಿ.ವಿ.ಮೋಹನ್ ದಾಸ್ ಪೈ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿ. ಸೋಮಶೇಖರ್ ಇದ್ದರು.</p>.<p>ಬಿಬಿಎಂಪಿ ಅಧಿಕಾರಿ/ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಮೃತಾ ಜೋಶಿ ಅವರಿಗೆ ₹1 ಲಕ್ಷ ಗೌರವ ಸಹಾಯಧನ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಅಮೃತ್ ರಾಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದಾದ್ಯಂತ ‘ತಿರಂಗಾ ಯಾತ್ರೆ’ ಕೈಗೊಂಡಿರುವ ಕಾಸರಗೋಡಿನ ಅಮೃತಾ ಜೋಶಿ ನಗರಕ್ಕೆ ಆಗಮಿಸಿದ್ದು, ಅವರನ್ನು ಬಿಬಿಎಂಪಿ ವತಿಯಿಂದ ಸನ್ಮಾನಿಸಲಾಯಿತು.</p>.<p>ನಾಲ್ಕು ತಿಂಗಳಿನಿಂದ 22 ಸಾವಿರ ಕಿ.ಮೀ. ಸಂಚರಿಸುತ್ತಿರುವ ಕನ್ನಡತಿ ಅಮೃತಾ, ‘ಹರ್ ಘರ್ ತಿರಂಗಾ’ ಅಭಿಯಾನದ ಮಹತ್ವವನ್ನು ಜನರಿಗೆ ತಿಳಿಸಲು ಈ ಯಾತ್ರೆ ನಡೆಸುತ್ತಿದ್ದಾರೆ. ಬೆಂಗಳೂರಿಗೆ ಮಂಗಳವಾರ ಬಂದಾಗ, ಬಿಬಿಎಂಪಿ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ವಿಕಾಸ ಟ್ರಸ್ಟ್ನಿಂದ ಸನ್ಮಾನಿಸಲಾಯಿತು.</p>.<p>ರಾಜ್ಕುಮಾರ್ ಗಾಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ಮಾತನಾಡಿ, ’ದೇಶದ ಎಲ್ಲ ಭಾಗಗಳಿಗೆ ಹೋಗಿ ಎಲ್ಲ ಸಂಸ್ಕೃತಿಯನ್ನು ಕಂಡಿದ್ದಾರೆ. ಉತ್ತರ ಭಾರತ ಸೇರಿದಂತೆ ಎಲ್ಲ ಭಾಗಗಳ ಮಹತ್ವವನ್ನೂ ತಿಳಿಸುತ್ತಿರುವುದು ಒಳ್ಳೆಯ ಕೆಲಸ’ ಎಂದು ಶ್ಲಾಘಿಸಿದರು.</p>.<p>‘ಚಿಕ್ಕವಳಿದ್ದಾಗಿನಿಂದ ಮೇಘಾಲಯ ನೋಡಬೇಕೆಂಬ ಆಸೆ ಇತ್ತು. ಕ್ಲಬ್ನವರಿಗೆ ಈ ಬಗ್ಗೆ ತಿಳಿಸಿದಾಗ ಅವರು ಈಶಾನ್ಯ ಭಾರತ ಚೆನ್ನಾಗಿದೆ. ಅಲ್ಲಿ ಪ್ರವಾಸ ಮಾಡಿ ಎಂದು ಹೇಳಿದರು. ನನ್ನ ಪ್ಯಾಷನ್ ಬೈಕ್. ಪ್ರಾಂತೀಯ ತಾರತಮ್ಯದ ವಿಷಯವಾಗಿ ಎಲ್ಲೆಡೆ ಅರಿವು ಮೂಡಿಸುವ ಗುರಿಯೊಂದಿಗೆ ಈ ಸಂಚಾರ ಆರಂಭಿಸಿದೆ’ ಎಂದು ಅಮೃತಾ ತಿಳಿಸಿದರು.</p>.<p>‘ಈಶಾನ್ಯ ಭಾರತದಲ್ಲಿ ಸಂಚಾರ ಮುಗಿಯುವ ವೇಳೆಗೆ ಅಲ್ಲಿನ ಜನರು ತುಂಬಾ ಆಪ್ತರಾದರು. ಅವರು ಎಲ್ಲರಿಗೂ ಸಹಾಯ ಮಾಡುತ್ತಾರೆ. ಅವರ ಪ್ರೀತಿ ಕಂಡಮೇಲೆ 8 ಸಾವಿರ ಕಿ.ಮೀಗೆ ಮುಗಿಸಬೇಕಿದ್ದ ಸಂಚಾರವನ್ನು ವಿಸ್ತರಿಸಿದೆ. ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ ಗಡಿಗಳಲ್ಲೂ ಸಂಚಾರ ಮಾಡಿದೆ. ಬಿಎಸ್ಎಫ್ನವರ ಕರ್ತವ್ಯವನ್ನು ಕಂಡು ಬೆರಗಾದೆ’ ಎಂದರು.</p>.<p>‘ಏಪ್ರಿಲ್ 25ಕ್ಕೆ ಉತ್ತರ ಪ್ರದೇಶದಲ್ಲಿ ಅಪಘಾತವಾಯಿತು. ಹಿಂದಿನಿಂದ ಕಾರ್ ಗುದ್ದಿತು. ಹೀಗಾಗಿ ನಾನು ಒಂದು ತಿಂಗಳು ವಿಶ್ರಾಂತಿ ತೆಗೆದುಕೊಂಡೆ. ಈ ಪ್ರವಾಸವನ್ನು ಮುಗಿಸಲೇಬೇಕು ಎಂದು ಅದೇ ಸ್ಥಳದಿಂದ ಸಂಚಾರ ಆರಂಭಿಸಿದೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಕಡೆಯವರು ಸಹಾಯ ಮಾಡಿದರು. ಇನ್ನೊಂದು ವಾರವಷ್ಟೆ ಸಂಚಾರ ಇದೆ. ಶಿವಮೊಗ್ಗಗೆ ಹೋಗುತ್ತೇನೆ’ ಎಂದು ಹೇಳಿದರು.</p>.<p>ಮಣಿಪಾಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಟಿ.ವಿ.ಮೋಹನ್ ದಾಸ್ ಪೈ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿ. ಸೋಮಶೇಖರ್ ಇದ್ದರು.</p>.<p>ಬಿಬಿಎಂಪಿ ಅಧಿಕಾರಿ/ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಮೃತಾ ಜೋಶಿ ಅವರಿಗೆ ₹1 ಲಕ್ಷ ಗೌರವ ಸಹಾಯಧನ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಅಮೃತ್ ರಾಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>