ವಿವಿ ಪರ ವಕೀಲರು ವಾದ ಮಂಡಿಸಿ, ‘ಜಗನ್ನಾಥ ರೆಡ್ಡಿ ವಿರುದ್ಧ ಗಂಭೀರ ಸ್ವರೂಪದ ಆರು ಆರೋಪಗಳಿವೆ. ಅವರನ್ನು ಫೆಬ್ರುವರಿಯಲ್ಲೇ ಅಮಾನತು ಮಾಡಲಾಗಿದೆ. ಆದರೆ, ಅವರು ಎರಡು ತಿಂಗಳು ಸುಮ್ಮನಿದ್ದು, ಈ ಹಿಂದೆ ಸಲ್ಲಿಸಿದ್ದ ಅರ್ಜಿಯ ಮನವಿಯನ್ನು ತಿದ್ದುಪಡಿ ಮಾಡಿ ಮಧ್ಯಂತರ ಆದೇಶ ಪಡೆದುಕೊಂಡಿದ್ದಾರೆ. ಆದ್ದರಿಂದ ಅದನ್ನು ರದ್ದುಪಡಿಬೇಕು’ ಎಂದು ಕೋರಿದರು.