ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಉಲ್ಲಂಘನೆ ಆರೋಪ: ಬಿ.ಎಸ್‌ ಯಡಿಯೂರಪ್ಪ ಕೋರ್ಟ್‌ಗೆ ಹಾಜರು

Last Updated 4 ಆಗಸ್ಟ್ 2018, 11:20 IST
ಅಕ್ಷರ ಗಾತ್ರ

ಬೆಂಗಳೂರು: ಗುಂಡ್ಲುಪೇಟೆ ಉಪ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರುಶನಿವಾರ ಸಿಟಿ ಸಿವಿಲ್‌ಕೋರ್ಟ್‌ಗೆ ಖುದ್ದು ಹಾಜರಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾಯಿತ ಸಂಸದರು ಮತ್ತು ಶಾಸಕರ ವಿರುದ್ಧಕೋರ್ಟ್ ದೋಷಾರೋಪಣೆ ನಿಗದಿಪಡಿಸಲಾಗಿದೆ.ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಲು ನ್ಯಾಯಾಧೀಶ ಬಿ.ವಿ.ಪಾಟೀಲ ಆದೇಶಿಸಿದ್ದು, ಅರ್ಜಿ‌ ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.

ಆರೋಪಗಳೇನು?
* ಚುನಾವಣೆ ವೇಳೆ ಗುಂಡ್ಲುಪೇಟೆಯ ವೊಡ್ಡನಹೊಸಹಳ್ಳಿಯ ಮೃತ ರೈತ ಚಿಕ್ಕಶೆಟ್ಟಿ ಕುಟುಂಬಕ್ಕೆ ಬಿ.ಎಸ್.ವೈ. ₹1 ಲಕ್ಷ ಹಣ ನೀಡಿದ್ದಾರೆ.
* ಕಮಲದ ಹೂವಿನ ಗುರುತಿಗೆ ಮತ ನೀಡುವಂತೆ ಮತದಾರರಿಂದ, ಕೈ ಎತ್ತಿ ಹೇಳಿ ನೋಡೋಣ ಎಂದು ಪ್ರಮಾಣ ಮಾಡಿಸಿಕೊಂಡಿದ್ದಾರೆ.
* ಈ ಎರಡು ಆರೋಪಗಳ ಕುರಿತಂತೆ ಚುನಾವಣಾ ಅಧಿಕಾರಿಗಳು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
* ಇದರನ್ವಯ ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್‌ಗೆ ಚಾರ್ಚ್ ಶೀಟ್ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT