ಸಾಲಮನ್ನಾದಿಂದ ಸರ್ಕಾರವು ಹಲವಾರು ಕೋಟಿಗಳ ಆರ್ಥಿಕ ಹೊರೆಯನ್ನು ಎದುರಿಸಬೇಕಾಗುತ್ತದೆ. ಈ ಹೊರೆಯು ತೆರಿಗೆಯ ರೂಪದಲ್ಲಿ ನಾಗರಿಕರ ಮೇಲೆಯೇ ಬರುತ್ತದೆ. ಆದ್ದರಿಂದ ಆರ್ಥಿಕವಾಗಿ ಸದೃಢರಾಗಿರುವ ರೈತರು ಸಾಲ ತೀರಿಸುವ ಹೊಣೆಯನ್ನು ಸರ್ಕಾರಕ್ಕೆ ಒಪ್ಪಿಸದೆ, ತಾವೇ ತೀರಿಸುವ ನಿರ್ಧಾರವನ್ನು ಕೈಗೊಂಡರೆ ತಮ್ಮ ವೃತ್ತಿಯ ಘನತೆಯನ್ನು ಉಳಿಸಿಕೊಂಡಂತಾಗುತ್ತದೆ.