<p><strong>ಬೆಂಗಳೂರು:</strong> ಕ್ಯಾನ್ಸರ್ನಿಂದ ಬಳಲುತ್ತಿದ್ದ ನಾಲ್ಕು ವರ್ಷದ ಮಗು ವಿಗೆ ತಂದೆಯ ಅಸ್ಥಿಮಜ್ಜೆಯನ್ನು ಕಸಿ ಮಾಡುವ ಮೂಲಕ ನಗರದ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜೂಂದಾರ್ ಷಾ ಕ್ಯಾನ್ಸರ್ ಕೇಂದ್ರವು ಯಶಸ್ವಿ ಕಸಿ ಚಿಕಿತ್ಸೆ ನೀಡಿದೆ. <br /> <br /> ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುನೀಲ್ ಭಟ್, ‘ನಾಲ್ಕು ವರ್ಷದ ಭುವನಾಳಿಗೆ ರಕ್ತ ಕ್ಯಾನ್ಸರ್<br /> (ಲ್ಯೂಕೆಮಿಯಾ)ಕಾಣಿಸಿಕೊಂಡಿತ್ತು. ಒಬ್ಬಳೇ ಮಗಳಾಗಿದ್ದರಿಂದ ತಂದೆಯ ಅಸ್ಥಿಮಜ್ಜೆಯ ಮೂಲಕವೇ ಚಿಕಿತ್ಸೆ ಮುಂದುವರೆಸಲಾಯಿತು’ ಎಂದು ಮಾಹಿತಿ ನೀಡಿದರು.<br /> <br /> ‘ಕ್ಯಾನ್ಸರ್ ರೋಗಿಗಳ ಅಸ್ಥಿ ಮಜ್ಜೆಗೆ ಹೋಲಿಕೆಯಾಗುವಂತಹ ಮಜ್ಜೆ ದೊರೆಯುವುದು ಬಹಳ ಕಷ್ಟ. ಅರ್ಧ ದಷ್ಟು ಹೋಲಿಕೆ ಇರುವ ಒಡ ಹುಟ್ಟಿ ದವರ ಹಾಗೂ ಪೋಷಕರ ಅಸ್ತಿ ಮಜ್ಜೆ ಯಿಂದಲೂ ಕಸಿ ಸಾಧ್ಯವೆಂಬ ವಿಚಾರ ಕುರಿತು ಜಾಗೃತಿ ಮೂಡಬೇಕಿದೆ’ ಎಂದು ತಿಳಿಸಿದರು.<br /> <br /> ‘ರಕ್ತ ಕ್ಯಾನ್ಸರ್ ಇದ್ದರೆ ಬಿಳಿ ರಕ್ತ ಕಣಗಳು ಸರಿಯಾಗಿ ಬೆಳೆಯಲು ಸಾಧ್ಯ ವಾಗುವುದಿಲ್ಲ. ಬಿಳಿ ರಕ್ತ ಕಣಗಳು ಮೂಳೆಯ ಮಜ್ಜೆಯ ಭಾಗದಲ್ಲಿ ಉತ್ಪಾದನೆಯಾಗುತ್ತದೆ. ಈ ಮಜ್ಜೆ ಯನ್ನು ಕಸಿ ಮಾಡುವುದರಿಂದ ಬಿಳಿ ರಕ್ತ ಕಣಗಳ ಪುನಶ್ಚೇತನ ಮಾಡಲು ಸಾಧ್ಯವಿದೆ. ಇದರಿಂದ ದೇಹದ ಪ್ರತಿ ರೋಧ ಶಕ್ತಿಯನ್ನು ಹೆಚ್ಚಿಸಲು ಸಹ ಕಾರಿಯಾಗುತ್ತದೆ’ ಎಂದು ಮಾಹಿತಿ ನೀಡಿದರು.<br /> <br /> ಭುವನ ತಂದೆ ಎಸ್.ದಿಲೀಪ್ ಕುಮಾರ್, ‘ಎರಡು ವರ್ಷಗಳಿಂದೀ ಚೆಗೆ ಮಗುವಿಗೆ ಪದೇ ಪದೇ ಜ್ವರ ಕಾಣಿಸಿಕೊಳ್ಳಲು ಆರಂಭವಾಯಿತು. ರಕ್ತಪರೀಕ್ಷೆ ಮಾಡಿಸಿದಾಗ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕಿದ್ವಾಯಿ ಸೇರಿದಂತೆ ಇತರೆ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು ಗುಣ ಮುಖವಾಗಿರಲಿಲ್ಲ’ ಎಂದು ಅವರು ತಿಳಿಸಿದರು.<br /> <br /> ‘ಅಸ್ಥಿ ಮಜ್ಜೆಯ ಕಸಿ ಮಾಡುವ ಬಗ್ಗೆ ತಿಳಿದಿದ್ದೆ. ದಾನಿಗಳಿಂದ ಮಜ್ಜೆ ಪಡೆಯುವುದು ಬಹಳ ದುಬಾರಿ ಯಾಗಿವುದರಿಂದ, ಬೇರೆ ಮಾರ್ಗ ವಿಲ್ಲದೇ ನಾನೇ ಮಜ್ಜೆಯನ್ನು ದಾನ ಮಾಡಲು ಮುಂದಾದೆ. ಮಗು ಈಗ ಸಂಪೂರ್ಣ ಗುಣಮುಖವಾಗಿದೆ. ಈವರೆಗೆ ₨ 12 ಲಕ್ಷ ಖರ್ಚಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕ್ಯಾನ್ಸರ್ನಿಂದ ಬಳಲುತ್ತಿದ್ದ ನಾಲ್ಕು ವರ್ಷದ ಮಗು ವಿಗೆ ತಂದೆಯ ಅಸ್ಥಿಮಜ್ಜೆಯನ್ನು ಕಸಿ ಮಾಡುವ ಮೂಲಕ ನಗರದ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜೂಂದಾರ್ ಷಾ ಕ್ಯಾನ್ಸರ್ ಕೇಂದ್ರವು ಯಶಸ್ವಿ ಕಸಿ ಚಿಕಿತ್ಸೆ ನೀಡಿದೆ. <br /> <br /> ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುನೀಲ್ ಭಟ್, ‘ನಾಲ್ಕು ವರ್ಷದ ಭುವನಾಳಿಗೆ ರಕ್ತ ಕ್ಯಾನ್ಸರ್<br /> (ಲ್ಯೂಕೆಮಿಯಾ)ಕಾಣಿಸಿಕೊಂಡಿತ್ತು. ಒಬ್ಬಳೇ ಮಗಳಾಗಿದ್ದರಿಂದ ತಂದೆಯ ಅಸ್ಥಿಮಜ್ಜೆಯ ಮೂಲಕವೇ ಚಿಕಿತ್ಸೆ ಮುಂದುವರೆಸಲಾಯಿತು’ ಎಂದು ಮಾಹಿತಿ ನೀಡಿದರು.<br /> <br /> ‘ಕ್ಯಾನ್ಸರ್ ರೋಗಿಗಳ ಅಸ್ಥಿ ಮಜ್ಜೆಗೆ ಹೋಲಿಕೆಯಾಗುವಂತಹ ಮಜ್ಜೆ ದೊರೆಯುವುದು ಬಹಳ ಕಷ್ಟ. ಅರ್ಧ ದಷ್ಟು ಹೋಲಿಕೆ ಇರುವ ಒಡ ಹುಟ್ಟಿ ದವರ ಹಾಗೂ ಪೋಷಕರ ಅಸ್ತಿ ಮಜ್ಜೆ ಯಿಂದಲೂ ಕಸಿ ಸಾಧ್ಯವೆಂಬ ವಿಚಾರ ಕುರಿತು ಜಾಗೃತಿ ಮೂಡಬೇಕಿದೆ’ ಎಂದು ತಿಳಿಸಿದರು.<br /> <br /> ‘ರಕ್ತ ಕ್ಯಾನ್ಸರ್ ಇದ್ದರೆ ಬಿಳಿ ರಕ್ತ ಕಣಗಳು ಸರಿಯಾಗಿ ಬೆಳೆಯಲು ಸಾಧ್ಯ ವಾಗುವುದಿಲ್ಲ. ಬಿಳಿ ರಕ್ತ ಕಣಗಳು ಮೂಳೆಯ ಮಜ್ಜೆಯ ಭಾಗದಲ್ಲಿ ಉತ್ಪಾದನೆಯಾಗುತ್ತದೆ. ಈ ಮಜ್ಜೆ ಯನ್ನು ಕಸಿ ಮಾಡುವುದರಿಂದ ಬಿಳಿ ರಕ್ತ ಕಣಗಳ ಪುನಶ್ಚೇತನ ಮಾಡಲು ಸಾಧ್ಯವಿದೆ. ಇದರಿಂದ ದೇಹದ ಪ್ರತಿ ರೋಧ ಶಕ್ತಿಯನ್ನು ಹೆಚ್ಚಿಸಲು ಸಹ ಕಾರಿಯಾಗುತ್ತದೆ’ ಎಂದು ಮಾಹಿತಿ ನೀಡಿದರು.<br /> <br /> ಭುವನ ತಂದೆ ಎಸ್.ದಿಲೀಪ್ ಕುಮಾರ್, ‘ಎರಡು ವರ್ಷಗಳಿಂದೀ ಚೆಗೆ ಮಗುವಿಗೆ ಪದೇ ಪದೇ ಜ್ವರ ಕಾಣಿಸಿಕೊಳ್ಳಲು ಆರಂಭವಾಯಿತು. ರಕ್ತಪರೀಕ್ಷೆ ಮಾಡಿಸಿದಾಗ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕಿದ್ವಾಯಿ ಸೇರಿದಂತೆ ಇತರೆ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು ಗುಣ ಮುಖವಾಗಿರಲಿಲ್ಲ’ ಎಂದು ಅವರು ತಿಳಿಸಿದರು.<br /> <br /> ‘ಅಸ್ಥಿ ಮಜ್ಜೆಯ ಕಸಿ ಮಾಡುವ ಬಗ್ಗೆ ತಿಳಿದಿದ್ದೆ. ದಾನಿಗಳಿಂದ ಮಜ್ಜೆ ಪಡೆಯುವುದು ಬಹಳ ದುಬಾರಿ ಯಾಗಿವುದರಿಂದ, ಬೇರೆ ಮಾರ್ಗ ವಿಲ್ಲದೇ ನಾನೇ ಮಜ್ಜೆಯನ್ನು ದಾನ ಮಾಡಲು ಮುಂದಾದೆ. ಮಗು ಈಗ ಸಂಪೂರ್ಣ ಗುಣಮುಖವಾಗಿದೆ. ಈವರೆಗೆ ₨ 12 ಲಕ್ಷ ಖರ್ಚಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>