ಬೆಂಗಳೂರು: ನಗರದ ಸಮಸ್ಯೆಗಳಿಗೆ ನಿಮ್ಮ ಬಳಿ ಉತ್ತರಗಳೂ ಇರಬಹುದು. ಅವುಗಳನ್ನು ನೀವು ಹಂಚಿಕೊಳ್ಳಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನ (ಐಐಪಿಎ) ಕರ್ನಾಟಕ ಪ್ರಾದೇಶಿಕ ಶಾಖೆ ವೇದಿಕೆ ಕಲ್ಪಿಸುತ್ತಿದೆ.
ನಗರದ ಆಡಳಿತ ವ್ಯವಸ್ಥೆ ಸುಧಾರಣೆ ಬಗ್ಗೆ ಚರ್ಚಿಸುವ ಸಲುವಾಗಿಯೇ ನಗರದ ಇನ್ಫೆಂಟ್ರಿ ರಸ್ತೆ ಬಳಿ ಇರುವ ‘ಐಎಎಸ್ ಅಧಿಕಾರಿಗಳ ಸಂಘದ ಕಟ್ಟಡದಲ್ಲಿರುವ ಆಡಳಿತಾತ್ಮಕ ಸಂಶೋಧನಾ ಸಂಸ್ಥೆಯಲ್ಲಿ ಐಐಪಿಎ ಇದೇ 18ರಂದು (ಶನಿವಾರ) ಮಧ್ಯಾಹ್ನ 3ರಿಂದ ಸಂವಾದವನ್ನು ಏರ್ಪಡಿಸಿದೆ.
ನಗರದ ಬದಲಾದ ಸ್ಥಿತಿ, ಆಡಳಿತ ವ್ಯವಸ್ಥೆಯಲ್ಲಿರುವ ಲೋಪಗಳು, ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಹ್ಮಣಿಯನ್ ಚರ್ಚೆಯ ವಿಚಾರಮಂಡಿಸಲಿದ್ದಾರೆ .