ನೆಲಮಂಗಲ: ಪಟ್ಟಣದ ಕುವೆಂಪು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಜಿ.ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
‘ಸಂಘದ ಸದಸ್ಯರ ಸಂಖ್ಯೆಯನ್ನು 10 ಸಾವಿರಕ್ಕೆ ಹೆಚ್ಚಿಸುವುದು, ಸಾಲ ವಸೂಲಾತಿ ಮಾಡುವುದು, ಈಗ ಇರುವ ₹14.60 ಕೋಟಿ ವಹಿವಾಟನ್ನು ₹25 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ್ದೇನೆ’ ಎಂದು ಎಚ್.ಜಿ.ರಾಜು ತಿಳಿಸಿದರು.