ಒಂದು ತಿಂಗಳಿನಿಂದ ಚರಂಡಿಗೆ ಮಣ್ಣು ಬಿದ್ದು ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆಯ ಗುಂಡಿಗಳಲ್ಲಿ ನಿಂತ ನೀರು ದುರ್ನಾತ ಬೀರುತ್ತಿದೆ. ಈ ರಸ್ತೆಯ ಅನತಿ ದೂರದಲ್ಲಿ ಖಾಸಗಿ ಶಾಲೆ ಮತ್ತು ಗ್ರಾಮಸ್ಥರ ಮನೆಗಳಿವೆ. ಶಾಲಾ ಮಕ್ಕಳು ಈ ಗಬ್ಬುವಾಸನೆ ಸೇವಿಸುತ್ತಾ ಓಡಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಗ್ರಾಮದ ನಿವಾಸಿ ಮಹೇಶ್.