ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘50 ವರ್ಷಗಳಿಂದ ನೆಮ್ಮದಿಯಾಗಿದ್ದವರನ್ನು ಏಕಾಏಕಿ ಏನೇನೋ ವದಂತಿ ಹಬ್ಬಿಸಿ ವಲಸೆ ಹೋಗುವಂತೆ ಮಾಡಲಾಗುತ್ತಿದೆ.ದಸರಾ, ದುರ್ಗಾಪೂಜೆ ಸಂದರ್ಭದಲ್ಲಿ ಜನ ತಮ್ಮ ಊರುಗಳಿಗೆ ವಾಪಸ್ ಹೋಗುವುದು ಸಾಮಾನ್ಯ. ಈ ಪ್ರಮಾಣ ಶೇ 1ರಷ್ಟು ಇರಬಹುದು ಅಷ್ಟೆ. ಹೋದವರು ಮತ್ತೆ ವಾಪಸಾಗಲಿದ್ದಾರೆ’ ಎಂದರು.