ಪ್ರಶಸ್ತಿಯು ₹50,000 ನಗದು, ಸ್ಮರಣಿಕೆಯನ್ನು ಒಳಗೊಂಡಿದೆ. ‘ಪ್ರಶಸ್ತಿಯ ಹಣವನ್ನು ಅಂಧರ ಶಾಲೆಗೆ ನೀಡಲು ನಿರ್ಧರಿಸಿದ್ದೇನೆ’ ಎಂದು ಚಂದ್ರೇಗೌಡ ತಿಳಿಸಿದರು. ಜೆ.ಎಚ್.ಪಟೇಲ್ ಅವರೊಂದಿಗಿನ ನೆನಪುಗಳನ್ನು ಬಿಚ್ಚಿಟ್ಟ ಅವರು, ‘ಶಾಸನಸಭೆಯಲ್ಲಿ ಪಟೇಲರು ಇದ್ದರೆ ಮಾತ್ರ ಅದಕ್ಕೆ ಕಳೆ. ಅವರ ವಾಕ್ಚಾತುರ್ಯ, ಹಾಸ್ಯಭರಿತ ಮಾತುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದವು. ಉತ್ತಮ ಸಂಸದೀಯ ಪಟುವಾಗಿದ್ದ ಅವರು, ಸಂದಿಗ್ಧ ಪರಿಸ್ಥಿತಿಗಳನ್ನೂ ಸಾವಧಾನದಿಂದ ನಿಭಾಯಿಸುತ್ತಿದ್ದರು’ ಎಂದರು.