ರಾಜರಾಜೇಶ್ವರಿನಗರ: ದಲಿತ ಅಧಿಕಾರಿಯ ಜಾತಿ ನಿಂದನೆ ಮಾಡಿರುವ ಸಹಾಯಕ ಕಂದಾಯ ಅಧಿಕಾರಿ ಸಿ.ಲಿಂಗಯ್ಯ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಜಾಗೃತಿ ಸಮಿತಿ ಸದಸ್ಯರು ರಾಜರಾಜೇಶ್ವರಿನಗರದಲ್ಲಿ ಬಿಬಿಎಂಪಿ ವಲಯ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ದಲಿತ ಜಾಗೃತಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಗುರುಮೂರ್ತಿ ಮಾತನಾಡಿ, `ಕೆಂಗೇರಿ ಉಪವಲಯದ ಉಲ್ಲಾಳ ವಾರ್ಡ್ನ 130ರ ಕಂದಾಯ ಪರಿವೀಕ್ಷಕ ವಿ.ಎನ್.ಶಿವಣ್ಣ ಎಂಬವರಿಗೆ ಸಿ.ಲಿಂಗಯ್ಯ ಬೆದರಿಕೆ ಹಾಕಿದ್ದಾರೆ.