ನೆಲಮಂಗಲ: ತಾಲ್ಲೂಕಿನ 24 ಗ್ರಾಮ ಪಂಚಾಯ್ತಿಗಳ ಪೈಕಿ 31 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಅರಿಶಿನಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಕ್ಕಸಂದ್ರ ಮತ ಕ್ಷೇತ್ರದಿಂದಲೇ 6 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ್ ಎಂ.ಸಿ. ನರಸಿಂಹಮೂರ್ತಿ ತಿಳಿಸಿದರು.
ಜಕ್ಕಸಂದ್ರ ಮತಕ್ಷೇತ್ರದಿಂದ ಯೋಜನಾ ಪ್ರಾಧಿಕಾರದ ಸದಸ್ಯ ಚಿಕ್ಕನಾಗಯ್ಯ, ಕಲ್ಪನಾ ಮಂಜುನಾಥ್, ನಾಗರಾಜು, ಗೋವಿಂದರಾಜು, ಮುನಿಬೈರಮ್ಮ, ಕೋಮಲಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.
ಬಿನ್ನಮಂಗಲದಿಂದ ಲತಾ, ಹೇಮಾವತಿ, ಉಮಾದೇವಿ, ಬಿ.ಟಿ.ಗಂಗರಾಜು, ಗೊಲ್ಲಹಳ್ಳಿ ಪಂಚಾಯ್ತಿಯ ಹ್ಯಾಡಾಳು ಮತಕ್ಷೇತ್ರದಿಂದ ಬಿ.ಎಂ.ಎಲ್.ಕೃಷ್ಣಪ್ಪ ಕೊಲೆ ಆರೋಪಿ ಎಚ್.ಡಿ.ಹರ್ಷ, ವಿ.ಆಶಾ, ಬೆಟ್ಟಳ್ಳಿಪಾಳ್ಯದ ಭಾಗ್ಯಮ್ಮ ಅವರು ಆಯ್ಕೆಯಾಗಿದ್ದಾರೆ.