‘ನಿಷೇಧ ತೆರವುಗೊಳಿಸುವ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿರುವ ಮೊಹಮದ್ ಅಲಿ ಎಂಬುವರ ವಿರುದ್ಧ ಆನೆ ಮರಿ ಬೇಟೆ, ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳು ತಮಿಳುನಾಡಿನ ಗೋಡಲೂರಿನಲ್ಲಿ ದಾಖಲಾಗಿವೆ. ಅಂತಹವರು ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದು ಅನುಮಾನಗಳಿಗೆ ಕಾರಣವಾಗಿದೆ’ ಎಂದು ಪರಿಸರ ಕಾರ್ಯಕರ್ತರು ಹೇಳಿದ್ದಾರೆ.