ಹೊಸಕೋಟೆ: ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳಲ್ಲಿನ ಪ್ರಯಾಣ ದರ ಏರಿಸಿರುವುದನ್ನು ವಿರೋಧಿಸಿ ತಾಲ್ಲೂಕು ಶಾಖೆಯ ಡಿವೈಎಫ್ಐನ ಸದಸ್ಯರು ಶುಕ್ರವಾರ ಸಂಜೆ ಹೆದ್ದಾರಿಯ ಚನ್ನಬೈರೇಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐನ ಅಧ್ಯಕ್ಷ ಎನ್.ಶ್ರೀನಿವಾಸಾಚಾರ್, `ಬಸ್ ದರ ಏರಿಸುವುದಿಲ್ಲ ಎಂದು ಜನತೆಗೆ ವಾಗ್ದಾನ ಮಾಡಿದ್ದ ಸಾರಿಗೆ ಸಚಿವರು ರಾತ್ರೋರಾತ್ರಿ ಬಸ್ ದರ ಏರಿಸಿರುವುದರ ಮೂಲಕ ಜನತೆಗೆ ವಂಚಿಸಿದ್ದಾರೆ.
ಬರಗಾಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿರುವ ಸಂದರ್ಭದಲ್ಲಿ ಏರಿಸಿರುವ ಬಸ್ ಪ್ರಯಾಣ ದರದಿಂದ ಇನ್ನಷ್ಟು ತೊಂದರೆಗೊಳಗಾಗಲಿದ್ದಾರೆ, ಈ ಕೂಡಲೇ ದರವನ್ನು ಇಳಿಸಬೇಕು~ ಎಂದು ಆಗ್ರಹಿಸಿದರು.
ಡಿವೈಎಫ್ಐ ಕಾರ್ಯದರ್ಶಿ ಎಚ್.ಎನ್.ಮೋಹನ್ಬಾಬು, ಮುಖಂಡರಾದ ವೈ.ರಾಮಾಂಜಿನಪ್ಪ, ನರಸಿಂಹಮೂರ್ತಿ ಮತ್ತಿತರರು ಮಾತನಾಡಿದರು.