ಬೆಂಗಳೂರು:‘ಕನ್ನಡ ರಾಜ್ಯೋತ್ಸವದಂದು ಬಿಜೆಪಿಯವರು ಪರಿವರ್ತನಾ ರ್ಯಾಲಿ ಹಮ್ಮಿಕೊಂಡಿರುವುದು ಖಂಡನಾರ್ಹ’ ಎಂದು ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಆರ್.ಎ. ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಧ್ವಜ ಹಾರಿಸುವ ದಿನದಂದು ಅದಕ್ಕೆ ಸವಾಲು ಎಂಬಂತೆ ಬಿಜೆಪಿ ನಾಯಕರು ಕೇಸರಿ ಬಾವುಟಗಳನ್ನು ಹಾರಿಸಲು ತಯಾರಿ ನಡೆಸುತ್ತಿದ್ದಾರೆ. ಇದರಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗುತ್ತದೆ’ ಎಂದರು.
‘ರಾಜ್ಯ ಬಿಜೆಪಿ ನಾಯಕರು ಅವರ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಆದೇಶದಂತೆ ಈ ರ್ಯಾಲಿ ನಡೆಸುತ್ತಿದ್ದಾರೆ. ಅವರಿಗೆ ರಾಜ್ಯದ ಹಿತಕ್ಕಿಂತ ದೆಹಲಿ ನಾಯಕರನ್ನು ಮೆಚ್ಚಿಸುವುದೇ ಅವರಿಗೆ ಮುಖ್ಯವಾಗಿದೆ’ ಎಂದರು.