<p><strong>ಬೆಂಗಳೂರು: </strong>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೌಕರರ ಅಂತರ ವರ್ಗಾವಣೆಗೆ ಆ. 8ರಿಂದ ಕೌನ್ಸೆಲಿಂಗ್ ಆರಂಭವಾಗಲಿದ್ದು, ಈ ಕಾರ್ಯಕ್ಕಾಗಿ ಆರು ತಂಡಗಳನ್ನು ರಚಿಸಲಾಗಿದೆ.<br /> <br /> ರಾಜ್ಕುಮಾರ್ ಗಾಜಿನಮನೆ, ಮಲ್ಲೇಶ್ವರದ ಐಪಿಪಿ ಕೇಂದ್ರದ ಮುಖ್ಯ ಸಭಾಂಗಣ, ಅದೇ ಕೇಂದ್ರದ ಮೊದಲನೇ ಮಹಡಿ ಸಭಾಂಗಣ, ಅನೆಕ್ಸ್ ಕಟ್ಟಡದ ಸಭಾಂಗಣ, ಮೆಯೊಹಾಲ್ ಹಾಗೂ ಟೌನ್ಹಾಲ್ನಲ್ಲಿ ಏಕಕಾಲಕ್ಕೆ ಮೂರು ದಿನಗಳವರೆಗೆ ಕೌನ್ಸೆಲಿಂಗ್ ನಡೆಯಲಿದೆ.<br /> <br /> ಉಪ ಆಯುಕ್ತ ಮಲ್ಲಿಕಾರ್ಜುನ, ಸಹಾಯಕ ಆಯುಕ್ತರಾದ ಹರಿಶಿಲ್ಪ, ಪಿ.ಎಂ.ನಂದಿನಿ, ಮಲ್ಲಿಕಾರ್ಜುನ, ಶಿವಕುಮಾರ್, ಕೌನ್ಸಿಲ್ ಕಾರ್ಯದರ್ಶಿ ಕೆ.ಎ. ಪಲ್ಲವಿ ಕೌನ್ಸೆಲಿಂಗ್ ತಂಡಗಳ ನೇತೃತ್ವ ವಹಿಸಲಿದ್ದಾರೆ. ವರ್ಗಾವಣೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಮಾರ್ಗಸೂಚಿಯನ್ನೂ ಸಿದ್ಧಪಡಿಸಲಾಗಿದೆ.<br /> <br /> ಯಾವುದೇ ನೌಕರ ಒಂದು ವಲಯದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ್ದರೆ ಬೇರೊಂದು ವಲಯಕ್ಕೆ ವರ್ಗಗೊಳ್ಳಲು ಅರ್ಹ. ಅದರಂತೆಯೇ ವರ್ಗಾವಣೆಗೆ ಅರ್ಹರ ಪಟ್ಟಿ ಸಿದ್ಧಪಡಿಸಲಾಗಿದೆ. ವರ್ಗಾವಣೆಗೆ ಎಷ್ಟು ಹುದ್ದೆಗಳಲ್ಲಿ ಇದ್ದವರನ್ನು ಗುರುತಿಸಲಾಗಿದೆಯೋ ಆ ಹುದ್ದೆಗಳು ಖಾಲಿ ಇವೆ ಎಂದು ಭಾವಿಸಲಾಗುತ್ತದೆ.<br /> <br /> ಖಾಲಿ ಇರುವ ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ನೌಕರರ ವರ್ಗ ಮಾಡಲಾಗುತ್ತದೆ. ಒಂದೇ ಹುದ್ದೆಗೆ ಒಬ್ಬರಿಗಿಂತ ಹೆಚ್ಚು ನೌಕರರು ಬೇಡಿಕೆ ಇಟ್ಟರೆ ಸೇವಾ ಹಿರಿತನದ ಆಧಾರದ ಮೇಲೆ ನಿರ್ಣಯ ಕೈಗೊಳ್ಳಲಾಗುತ್ತದೆ.<br /> <br /> ಹಿರಿತನದ ಆಧಾರದ ಮೇಲೆ ಪ್ರತಿಸಲ 20 ಜನರ ತಂಡವನ್ನು ಕೌನ್ಸೆಲಿಂಗ್ಗೆ ಕರೆಯಲಾಗುತ್ತದೆ. ಮೊದಲು ಅವಕಾಶ ಗಿಟ್ಟಿಸಿದವರು ಆಯ್ಕೆ ಮಾಡಿಕೊಂಡ ಹುದ್ದೆಯನ್ನು ಬ್ಲಾಕ್ ಮಾಡಲಾಗುತ್ತದೆ.<br /> <br /> ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಆದೇಶ ಪಡೆದವರಿಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಮತ್ತೆ ವರ್ಗಾವಣೆಗೆ ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೌಕರರ ಅಂತರ ವರ್ಗಾವಣೆಗೆ ಆ. 8ರಿಂದ ಕೌನ್ಸೆಲಿಂಗ್ ಆರಂಭವಾಗಲಿದ್ದು, ಈ ಕಾರ್ಯಕ್ಕಾಗಿ ಆರು ತಂಡಗಳನ್ನು ರಚಿಸಲಾಗಿದೆ.<br /> <br /> ರಾಜ್ಕುಮಾರ್ ಗಾಜಿನಮನೆ, ಮಲ್ಲೇಶ್ವರದ ಐಪಿಪಿ ಕೇಂದ್ರದ ಮುಖ್ಯ ಸಭಾಂಗಣ, ಅದೇ ಕೇಂದ್ರದ ಮೊದಲನೇ ಮಹಡಿ ಸಭಾಂಗಣ, ಅನೆಕ್ಸ್ ಕಟ್ಟಡದ ಸಭಾಂಗಣ, ಮೆಯೊಹಾಲ್ ಹಾಗೂ ಟೌನ್ಹಾಲ್ನಲ್ಲಿ ಏಕಕಾಲಕ್ಕೆ ಮೂರು ದಿನಗಳವರೆಗೆ ಕೌನ್ಸೆಲಿಂಗ್ ನಡೆಯಲಿದೆ.<br /> <br /> ಉಪ ಆಯುಕ್ತ ಮಲ್ಲಿಕಾರ್ಜುನ, ಸಹಾಯಕ ಆಯುಕ್ತರಾದ ಹರಿಶಿಲ್ಪ, ಪಿ.ಎಂ.ನಂದಿನಿ, ಮಲ್ಲಿಕಾರ್ಜುನ, ಶಿವಕುಮಾರ್, ಕೌನ್ಸಿಲ್ ಕಾರ್ಯದರ್ಶಿ ಕೆ.ಎ. ಪಲ್ಲವಿ ಕೌನ್ಸೆಲಿಂಗ್ ತಂಡಗಳ ನೇತೃತ್ವ ವಹಿಸಲಿದ್ದಾರೆ. ವರ್ಗಾವಣೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಮಾರ್ಗಸೂಚಿಯನ್ನೂ ಸಿದ್ಧಪಡಿಸಲಾಗಿದೆ.<br /> <br /> ಯಾವುದೇ ನೌಕರ ಒಂದು ವಲಯದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ್ದರೆ ಬೇರೊಂದು ವಲಯಕ್ಕೆ ವರ್ಗಗೊಳ್ಳಲು ಅರ್ಹ. ಅದರಂತೆಯೇ ವರ್ಗಾವಣೆಗೆ ಅರ್ಹರ ಪಟ್ಟಿ ಸಿದ್ಧಪಡಿಸಲಾಗಿದೆ. ವರ್ಗಾವಣೆಗೆ ಎಷ್ಟು ಹುದ್ದೆಗಳಲ್ಲಿ ಇದ್ದವರನ್ನು ಗುರುತಿಸಲಾಗಿದೆಯೋ ಆ ಹುದ್ದೆಗಳು ಖಾಲಿ ಇವೆ ಎಂದು ಭಾವಿಸಲಾಗುತ್ತದೆ.<br /> <br /> ಖಾಲಿ ಇರುವ ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ನೌಕರರ ವರ್ಗ ಮಾಡಲಾಗುತ್ತದೆ. ಒಂದೇ ಹುದ್ದೆಗೆ ಒಬ್ಬರಿಗಿಂತ ಹೆಚ್ಚು ನೌಕರರು ಬೇಡಿಕೆ ಇಟ್ಟರೆ ಸೇವಾ ಹಿರಿತನದ ಆಧಾರದ ಮೇಲೆ ನಿರ್ಣಯ ಕೈಗೊಳ್ಳಲಾಗುತ್ತದೆ.<br /> <br /> ಹಿರಿತನದ ಆಧಾರದ ಮೇಲೆ ಪ್ರತಿಸಲ 20 ಜನರ ತಂಡವನ್ನು ಕೌನ್ಸೆಲಿಂಗ್ಗೆ ಕರೆಯಲಾಗುತ್ತದೆ. ಮೊದಲು ಅವಕಾಶ ಗಿಟ್ಟಿಸಿದವರು ಆಯ್ಕೆ ಮಾಡಿಕೊಂಡ ಹುದ್ದೆಯನ್ನು ಬ್ಲಾಕ್ ಮಾಡಲಾಗುತ್ತದೆ.<br /> <br /> ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಆದೇಶ ಪಡೆದವರಿಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಮತ್ತೆ ವರ್ಗಾವಣೆಗೆ ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>