ಕೃಷ್ಣರಾಜಪುರ: ಹೊರಮಾವು ವಾರ್ಡ್ ವ್ಯಾಪ್ತಿಯಲ್ಲಿ ಬಿಬಿಎಂಪಿಗೆ ಸೇರಿದ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎನ್.ಎಸ್. ನಂದೀಶರೆಡ್ಡಿ ಅವರು ಕೊತ್ತನೂರು ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಅಂದಾಜು 85 ರಿಂದ 90 ಗ್ರಾಮೀಣ ಭಾಗದ ರಸ್ತೆಗಳು ಹೊರಮಾವು ವಾರ್ಡ್ ವ್ಯಾಪ್ತಿಗೆ ಸೇರಿದ್ದು ರಸ್ತೆಗಳ ದುರಸ್ತಿ ಕಾರ್ಯವನ್ನು ಹಂತ-ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ವೇಣುಗೋಪಾಲ್, ಗೆದ್ದಲಹಳ್ಳಿ ಗ್ರಾಮದ ವಿನಾಯಕ ಬಡಾವಣೆ ಮುಖ್ಯ ರಸ್ತೆ ಅಭಿವೃದ್ಧಿ, ಬಾಲಾಜಿ ಬಡಾವಣೆ ರಸ್ತೆ, ಸಿಎಸ್ಐ ಬಡಾವಣೆ ಮುಖ್ಯ ರಸ್ತೆ, ವೀರಣ್ಣಗುಡಿ ಮುಖ್ಯ ರಸ್ತೆಯ ಅಭಿವೃದ್ಧಿ, ತಿಮ್ಮೇಗೌಡ ಬಡಾವಣೆ ಮುಖ್ಯ ರಸ್ತೆ ಅಭಿವೃದ್ಧಿಗಾಗಿ ಸುಮಾರು 80 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗುವುದು ಎಂದರು.
ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಗೋಪಾಲ್ರೆಡ್ಡಿ, ಪಾಲಿಕೆ ಸದಸ್ಯೆ ತೇಜಸ್ವಿನಿ ರಾಜು, ಸಿದ್ದಲಿಂಗಯ್ಯ, ಎನ್.ವೀರಣ್ಣ, ಮುಖಂಡರಾದ ಕಲ್ಕೆರೆ ಎನ್.ಶ್ರೀನಿವಾಸ್, ಚಿದಾನಂದ, ಶಾಂತರಾಜ ಅರಸು, ಬಾಕ್ಸರ್ ನಾಗರಾಜ್, ಬಿ.ಎಚ್. ಗಣೇಶರೆಡ್ಡಿ, ರಮೇಶ್, ಮಧು, ಅಶೋಕ್ ಕುಮಾರ್, ಗೌರಮ್ಮ, ಇಂದಿರಮ್ಮ ಮತ್ತಿತರರು ಉಪಸ್ಥಿತರಿದ್ದರು.