ಬೆಂಗಳೂರು: ‘ಸರ್ಕಾರ ನೀಡುವ ಪ್ರಶಸ್ತಿಗಳಿಗೆ ಸ್ಪಷ್ಟವಾದ ನೀತಿ, ನಿಯಮ, ಮಾನದಂಡಗಳಿಲ್ಲ. ಇದರಿಂದ ಅವು ಮೌಲ್ಯವನ್ನು ಕಳೆದುಕೊಳ್ಳುತ್ತಿವೆ’ ಎಂದು ನಟ ರಾಜೇಶ್ ವಿಷಾದ ವ್ಯಕ್ತಪಡಿಸಿದರು.
ಹಂಸಜ್ಯೋತಿ ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡಿದ್ದ ‘ಹಂಸ ವಸಂತ ಋತು ಸಂಭ್ರಮ ಹಾಗೂ ಹಂಸ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಮಾತನಾಡಿದರು.
‘ಪ್ರಶಸ್ತಿಗಳಿಗೆ ಅನರ್ಹರು ಆಯ್ಕೆಯಾಗುತ್ತಿದ್ದಾರೆ. ಅವರಿಂದಲೇ ಪ್ರಶಸ್ತಿಗಳು ಮಾರಾಟದ ವಸ್ತುಗಳಂತಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹಂಸಕ್ಷೀರ ನ್ಯಾಯದಂತೆ ನಾವು ನಡೆದುಕೊಳ್ಳಬೇಕು. ಆತ್ಮಸಾಕ್ಷಿ ಯಂತೆ ಕಾರ್ಯ ನಿರ್ವಹಿಸಬೇಕು. ಇದರಿಂದ ಸಿಗುವ ನೆಮ್ಮದಿ, ಗೌರ ವವೇ ಶ್ರೇಷ್ಠವಾದದ್ದು’ ಎಂದರು.
ಸಂಸ್ಥೆಯ ಅಧ್ಯಕ್ಷ ಜಿ.ಶ್ರೀಕಾಂತ್ ಮಾತನಾಡಿ, ‘ಎಲೆಮರೆ ಕಾಯಿ ಯಂತೆ ಸೇವೆ ಸಲ್ಲಿಸುತ್ತಿ ರುವವರನ್ನು ಗುರುತಿಸಿ ಗೌರವಿಸಲಾಗುತ್ತಿದೆ’ ಎಂದರು.