ಕಿರಿದಾಗಿದ್ದ ರೈಲ್ವೆ ಕ್ರಾಸಿಂಗ್ನಿಂದಾಗಿ ವರ್ತೂರು ಹೋಬಳಿ ಮತ್ತು ಸರ್ಜಾಪುರ ರಸ್ತೆ ಜನರು ಬಹಳ ಕಾಲದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈಸಮಸ್ಯೆ ನಿವಾರಣೆಗೆ ಆಗ್ರಹಿಸಿ ಸುತ್ತಮುತ್ತಲಿನ ಪ್ರದೇಶದ ಜನರು ತಿಂಗಳುಗಟ್ಟಲೆ ಪ್ರತಿಭಟನೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಂಡಿದ್ದರು. ಇದಕ್ಕೆ ಸ್ಪಂದಿಸಿದ್ದ ರೈಲ್ವೆ ಇಲಾಖೆ, ಜಾಗದ ಪೂರ್ಣ ಪರಿಶೀಲನೆ ನಡೆಸಿ, ಸುಮಾರು 16 ಲಕ್ಷ ವೆಚ್ಚದ ಕಾಮಗಾರಿಯ ನೀಲನಕ್ಷೆಯನ್ನು ಬಿಬಿಎಂಪಿಗೆ ನೀಡಿ ರಸ್ತೆ ವಿಸ್ತರಿಸುವಂತೆ ಹೇಳಿತ್ತು. ಆದರೆ, ಬಿಬಿಎ೦ಪಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.