ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ವಿಕಿರಣ ಭೌತಶಾಸ್ತ್ರದ ರಾಷ್ಟ್ರೀಯ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ಆಹಾರ ಸಂಸ್ಕರಣೆ, ಔಷಧಗಳ ಬಳಕೆಯಲ್ಲಿ ಪ್ರಗತಿ ಸಾಧಿಸಿದ್ದೇವೆ. ಉಪಗ್ರಹ ಉಡಾವಣೆಯಲ್ಲೂ ಬಹಳಷ್ಟು ಸಾಧನೆಗಳು ಆಗಿವೆ. ಆದರೆ, ಉಪಗ್ರಹದ ಜೀವಿತ ಅವಧಿ ಹೆಚ್ಚಿಸುವುದರ ಬಗ್ಗೆ ಚಿಂತಿಸಬೇಕಿದೆ. ವಿಕಿರಣಗಳನ್ನು ಸುರಕ್ಷಿತವಾಗಿ ಬಳಸುವುದರ ಬಗ್ಗೆಯೂ ಗಮನ ನೀಡಬೇಕಿದೆ’ ಎಂದರು.