ಸಚಿವರು ಮನವಿ ಸ್ವೀಕರಿಸಲು ಸ್ವಾತಂತ್ರ್ಯ ಉದ್ಯಾನಕ್ಕೆ ಬರಲಿಲ್ಲ. ಹೀಗಾಗಿ, ವಿಧಾನಸೌಧಕ್ಕೆ ಹೋಗಿಯೇ ಮನವಿ ನೀಡಲು ಮುಂದಾದೆವು. ಈ ವೇಳೆ ಪೊಲೀಸರೇ ನಮ್ಮೊಡನೆ ಅನುಚಿತವಾಗಿ ವರ್ತಿಸಿ ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಕೆಲವರು ಗಾಯಗೊಂಡು ಮಲ್ಲೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು.