<p>ಬೆಂಗಳೂರು: `ಸಮಾಜ ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ವೃದ್ಧಿಸಲು ಪ್ರತಿಭಾ ಶೋಧ ಪರೀಕ್ಷೆಯನ್ನು ಮೇ 27 ರಂದು ಏರ್ಪಡಿಸಲಾಗಿದೆ~ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ (ಐಸೆಕ್) ನಿರ್ದೇಶಕ ಪ್ರೊ.ಆರ್.ಎಸ್. ದೇಶಪಾಂಡೆ ಗುರುವಾರ ಹೇಳಿದರು.<br /> <br /> ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಜ್ಞಾನ ಆಯೋಗ, ಐಸೆಕ್ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಯೋಜನೆಯನ್ನು ರೂಪಿಸಲಾ ಗಿದೆ~ ಎಂದರು. `ಬೆಂಗಳೂರು ವಿಭಾಗದಲ್ಲಿ ಸುಮಾರು 800 ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾರಂಭಿಕ ಹಂತವಾಗಿ ಯೋಜನೆಯನ್ನು ಆರಂಭಿಲಾಗಿದೆ ಎಂದು ತಿಳಿಸಿದರು.<br /> <br /> ಕಳೆದ ವರ್ಷ ಪರೀಕ್ಷೆಯನ್ನು ಐದು ಜಿಲ್ಲೆಗಳ 10 ಕೇಂದ್ರಗಳಲ್ಲಿ ನಡೆಸಲಾ ಗಿತ್ತು. 800ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಅತಿ ಹೆಚ್ಚು ಅಂಕ ಪಡೆದ 25 ವಿದ್ಯಾರ್ಥಿ ಗಳನ್ನು ಆರಿಸಲಾಗಿದೆ ಎಂದರು.<br /> <br /> `ಅತಿ ಹೆಚ್ಚು ಅಂಕ ಪಡೆದ 25 ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಮಾಸಿಕ 500 ರೂಪಾಯಿ ಮತ್ತು ಕರ್ನಾಟಕ ರಾಜ್ಯ ಜ್ಞಾನ ಆಯೋಗದ ವತಿಯಿಂದ ವಾರ್ಷಿಕ 2,500 ರೂಪಾಯಿ ವಿದ್ಯಾರ್ಥಿ ವೇತನಗಳನ್ನು ಪದವಿಯ ಮೂರು ವರ್ಷಗಳ ಅವಧಿಗೆ ನೀಡಲಾಗುವುದು~ ಎಂದು ಅವರು ಹೇಳಿದರು.<br /> <br /> ಪ್ರಸಕ್ತ ಸಾಲಿನ ಪ್ರತಿಭಾ ಶೋಧ ಪರೀಕ್ಷೆಯು ಮೇ 27 ರಂದು ನಡೆಯಲಿದ್ದು, ಸಂಬಂಧಪಟ್ಟ ಅರ್ಜಿಯನ್ನು ಐಸೆಕ್ ವೆಬ್ಸೈಟ್ನಿಂದ ಪಡೆದು ಮೇ 5 ರೊಳಗಾಗಿ ಸಲ್ಲಿಸಲು ಸೂಚಿಸಲಾಗಿದೆ.<br /> <br /> ಅರ್ಜಿಯೊಂದಿಗೆ 100 ರೂಪಾಯಿಗಳ ಪೋಸ್ಟಲ್ ಆರ್ಡರ್ ಅನ್ನು `ದಿ ರಿಜಿಸ್ಟ್ರಾರ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ಐಸೆಕ್) ನಾಗರಬಾವಿ~ , ಇಲ್ಲಿಗೆ ಕಳುಹಿಸಬೇಕು. ವೆಬ್ಸೈಟ್ ವಿಳಾಸ: <a href="http://www.isec.ac.in">www.isec.ac.in</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಸಮಾಜ ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ವೃದ್ಧಿಸಲು ಪ್ರತಿಭಾ ಶೋಧ ಪರೀಕ್ಷೆಯನ್ನು ಮೇ 27 ರಂದು ಏರ್ಪಡಿಸಲಾಗಿದೆ~ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ (ಐಸೆಕ್) ನಿರ್ದೇಶಕ ಪ್ರೊ.ಆರ್.ಎಸ್. ದೇಶಪಾಂಡೆ ಗುರುವಾರ ಹೇಳಿದರು.<br /> <br /> ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಜ್ಞಾನ ಆಯೋಗ, ಐಸೆಕ್ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಯೋಜನೆಯನ್ನು ರೂಪಿಸಲಾ ಗಿದೆ~ ಎಂದರು. `ಬೆಂಗಳೂರು ವಿಭಾಗದಲ್ಲಿ ಸುಮಾರು 800 ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾರಂಭಿಕ ಹಂತವಾಗಿ ಯೋಜನೆಯನ್ನು ಆರಂಭಿಲಾಗಿದೆ ಎಂದು ತಿಳಿಸಿದರು.<br /> <br /> ಕಳೆದ ವರ್ಷ ಪರೀಕ್ಷೆಯನ್ನು ಐದು ಜಿಲ್ಲೆಗಳ 10 ಕೇಂದ್ರಗಳಲ್ಲಿ ನಡೆಸಲಾ ಗಿತ್ತು. 800ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಅತಿ ಹೆಚ್ಚು ಅಂಕ ಪಡೆದ 25 ವಿದ್ಯಾರ್ಥಿ ಗಳನ್ನು ಆರಿಸಲಾಗಿದೆ ಎಂದರು.<br /> <br /> `ಅತಿ ಹೆಚ್ಚು ಅಂಕ ಪಡೆದ 25 ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಮಾಸಿಕ 500 ರೂಪಾಯಿ ಮತ್ತು ಕರ್ನಾಟಕ ರಾಜ್ಯ ಜ್ಞಾನ ಆಯೋಗದ ವತಿಯಿಂದ ವಾರ್ಷಿಕ 2,500 ರೂಪಾಯಿ ವಿದ್ಯಾರ್ಥಿ ವೇತನಗಳನ್ನು ಪದವಿಯ ಮೂರು ವರ್ಷಗಳ ಅವಧಿಗೆ ನೀಡಲಾಗುವುದು~ ಎಂದು ಅವರು ಹೇಳಿದರು.<br /> <br /> ಪ್ರಸಕ್ತ ಸಾಲಿನ ಪ್ರತಿಭಾ ಶೋಧ ಪರೀಕ್ಷೆಯು ಮೇ 27 ರಂದು ನಡೆಯಲಿದ್ದು, ಸಂಬಂಧಪಟ್ಟ ಅರ್ಜಿಯನ್ನು ಐಸೆಕ್ ವೆಬ್ಸೈಟ್ನಿಂದ ಪಡೆದು ಮೇ 5 ರೊಳಗಾಗಿ ಸಲ್ಲಿಸಲು ಸೂಚಿಸಲಾಗಿದೆ.<br /> <br /> ಅರ್ಜಿಯೊಂದಿಗೆ 100 ರೂಪಾಯಿಗಳ ಪೋಸ್ಟಲ್ ಆರ್ಡರ್ ಅನ್ನು `ದಿ ರಿಜಿಸ್ಟ್ರಾರ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ಐಸೆಕ್) ನಾಗರಬಾವಿ~ , ಇಲ್ಲಿಗೆ ಕಳುಹಿಸಬೇಕು. ವೆಬ್ಸೈಟ್ ವಿಳಾಸ: <a href="http://www.isec.ac.in">www.isec.ac.in</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>