ದಾಬಸ್ ಪೇಟೆ: ಸರಗಳ್ಳತನ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ದಾಬಸ್ಪೇಟೆ ಪೊಲೀಸರು ಬಂಧಿಸಿದ್ದಾರೆ.ಕೊರಟಗೆರೆ ತಾಲ್ಲೂಕಿನ ಮಂಜುನಾಥ(35) ಹಾಗೂ ನೀಲಕಂಠ(28) ಬಂಧಿತರು. ‘ದಾಬಸ್ ಪೇಟೆ ಪಬ್ಲಿಕ್ ಶಾಲೆ’ ಬಳಿ ಇದೇ 5ರಂದು ರಸ್ತೆ ಬದಿ ಸುಶೀಲಮ್ಮ ಅವರ 50ಗ್ರಾಂ ಮಾಂಗಲ್ಯ ಸರ ಹಾಗೂ 100 ಗ್ರಾಂ ಕರಡಿಗೆ ಕದ್ದು ಪರಾರಿಯಾಗಿದ್ದರು.