ಬೆಂಗಳೂರು: ಇತಿಹಾಸ ತಜ್ಞ ಡಾ. ಯು. ಸೂರ್ಯನಾಥ್ ಕಾಮತ್ (77) ಅವರು ಬುಧವಾರ ಸಂಜೆ ಬನಶಂಕರಿ 3ನೇ ಹಂತದಲ್ಲಿರುವ ತಮ್ಮ ಮಗಳ ಮನೆಯಲ್ಲಿನಿಧನರಾದರು.
ಅವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಸೂರ್ಯನಾಥ್ ಅವರು ಎರಡೂವರೆ ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು.
‘ಪ್ರಜಾವಾಣಿ’ಯಲ್ಲಿದ್ದ ಸೂರ್ಯನಾಥ್ ಕಾಮತ್
ಬೆಂಗಳೂರು: ಸೂರ್ಯನಾಥ್ ಕಾಮತ್ ಅವರು 1937ರ ಏಪ್ರಿಲ್ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ್ದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿ ಪಡೆದಿದ್ದರು. ‘ವಿಜಯನಗರ ಕಾಲದ ತುಳುನಾಡು’ ಎಂಬ ಪ್ರೌಢಪ್ರಬಂಧಕ್ಕೆ ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದರು.