‘ಮೊದಲು ನಮ್ಮಲ್ಲಿ ಒಂದು ಕೊಳವೆ ಬಾವಿ ಇತ್ತು. ಅದರಿಂದ ಎರಡು ಎಕರೆ ಕಬ್ಬು ನಾಟಿ ಮಾಡಿ ಉಪಜೀವನ ನಡೆಸುತ್ತಿದ್ದೆವು. ಮಕ್ಕಳ ಓದಿಗೆ ಒಂದಿಷ್ಟು ಅನುಕೂಲವಾಗಲೆಂದು ಕಳೆದ ವರ್ಷ ಮತ್ತೊಂದು ಕೊಳವೆ ಬಾವಿ ಕೊರೆದು ಒಟ್ಟು 4 ಎಕರೆ ಕಬ್ಬು ನಾಟಿ ಮಾಡಿದ್ದೇವೆ. ಆದರೆ ಕಳೆದ ಒಂದು ತಿಂಗಳ ಹಿಂದೆ ಎರಡೂ ಕೊಳವೆ ಬಾವಿ ಕೈಕೊಟ್ಟಿರುವುದರಿಂದ ಈಗ ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದೇವೆ’ ಎಂದು ರೈತ ಮಾರುತಿ ಖಂಡೆ ಕಳವಳ ವ್ಯಕ್ತಪಡಿಸಿದ್ದಾರೆ.