<p><strong>ಚಿಟಗುಪ್ಪ</strong>: ತಾಲ್ಲೂಕಿನ ನಿರ್ಣಾ ಗ್ರಾಮದ ರೈತರಲ್ಲಿ ಈ ವರ್ಷದ ಮುಂಗಾರು ಮಳೆ ಹರ್ಷ ತಂದಿದೆ. ಹವಾಮಾನ ವೈಪರಿತ್ಯ, ಸಕಾಲಕ್ಕೆ ಬಾರದ ಮಳೆಯಿಂದ ಬೇಸತ್ತ ರೈತರು ದಶಕಗಳಿಂದ ಭತ್ತ ನಾಟಿ ಮಾಡುವುದನ್ನೆ ನಿಲ್ಲಿಸಿದ್ದರು.</p>.<p>ಕಲ್ಯಾಣ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಜನ ಮದುವೆ, ಶುಭ ಕಾರ್ಯ, ಸಭೆ ಸಮಾರಂಭಗಳಿಗೆ ಇಲ್ಲಿಗೆ ಬಂದು ಭತ್ತ ಖರಿದಿಸುತ್ತಿದ್ದ ಕಾಲವೊಂದಿತ್ತು. ಆದರೆ ಭತ್ತದ ಬೆಳೆಗೆ ಬೇಕಾಗುವಷ್ಟು ಮಳೆ ಆಗದಕ್ಕೆ ಕಳೆದ 10-12 ವರ್ಷಗಳಿಂದ ಗ್ರಾಮದ ರೈತರು ಭತ್ತ ನಾಟಿ ಮಾಡುವ ಸಾಹಸಕ್ಕೆ ಮುಂದಾಗಿರಲಿಲ್ಲ, ಈ ವರ್ಷದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಉತ್ತಮವಾಗಿ ಬರುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭತ್ತ ನಾಟಿ ಕಾರ್ಯ ಭರದಿಂದ ಸಾಗಿದೆ.</p>.<p>ಭತ್ತ ನಾಟಿ ಮಾಡಲು ಬೀಜ ಹಾಕಿದ್ದು ಸಸಿಗಳು ಫಲವತ್ತಾಗಿ ಬೆಳೆದಿವೆ, ಹೀಗಾಗಿ ಬಹುತೇಕ ರೈತರು ನಾಟಿ ಕಾರ್ಯ ಆರಂಭಿಸಿದ್ದಾರೆ.</p>.<p>‘ಹಲವು ವರ್ಷಗಳಿಂದ ಭತ್ತದ ಬೆಳೆಯಿಂದ ವಂಚಿತರಾಗಿದ್ದ ನಮಗೆ ಈ ಹಂಗಾಮಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಒಳ್ಳೆಯ ಫಸಲು ಪಡೆಯುವ ನಿಟ್ಟಿನಲ್ಲಿ ಭೂತಾಯಿಯನ್ನು ನಂಬಿ ಭತ್ತ ನಾಟಿಗೆ ಅಣಿಯಾಗಿದ್ದೆವೆʼ ಎಂದು ಗ್ರಾಮದ ರೈತ ರಾಮಪ್ಪ ‘ಪ್ರಜಾವಾಣಿʼಗೆ ತಿಳಿಸಿದರು.</p>.<p>‘ಭತ್ತ ನಾಟಿ ಮಾಡಲು ಕೃಷಿ ಕಾರ್ಮಿಕರ ಕೂಲಿ ಹೆಚ್ಚಾಗಿದೆ, ಕೇವಲ ಮಳೆಯನ್ನು ಆಧಾರವಾಗಿಟ್ಟುಕೊಂಡು ಮುಂದಿನ ಫಸಲು ಬರುವವರೆಗಿನ ಸವಾಲುಗಳು ಎದುರಿಸಲು ಗಟ್ಟಿ ನಿರ್ಧಾರ ಮಾಡಿ ನಾಟಿ ಕಾರ್ಯ ಆರಂಭಿಸಲಾಗಿದೆ’ ಎಂದು ರೈತ ಮಲ್ಲಪ್ಪ ನುಡಿಯುತ್ತಾರೆ.</p>.<p>ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳ ಬೆಲೆಯೂ ಹೆಚ್ಚಾಗಿದೆ, ಫಸಲು ಬಂದ ಮೇಲೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಲಭಿಸಿದಾಗ ಮಾತ್ರ ಭತ್ತ ಬೆಳೆದ ರೈತರ ಬದುಕು ಹಸನಾಗುತ್ತದೆ. ದಶಕದ ಕನಸು ನನಸಾಗುತ್ತದೆ, ಮತ್ತೆ ದೂರ ದೂರದ ಜನ ಗ್ರಾಮಕ್ಕೆ ಬಂದು ಭತ್ತ ಖರಿದಿಸುತ್ತಾರೆ. </p>.<div><blockquote>ನಾಟಿ ಮಾಡಿದ ಭತ್ತದ ಫಸಲು ರೈತರ ಕೈಗೆ ಬರಲು ಕೊನೆಯವರೆಗೂ ಮಳೆರಾಯನ ಕೃಪೆ ಹಿಗೆಯೇ ಇರಬೇಕಾಗುತ್ತದೆ. ಹೀಗಾಗಿ ಭತ್ತದ ಬೆಳೆ ಬಿಸಿ ತುಪ್ಪದಂತಿದೆ.</blockquote><span class="attribution">ಸುಭಾಷ ಕುಂಬಾರ್, ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪ</strong>: ತಾಲ್ಲೂಕಿನ ನಿರ್ಣಾ ಗ್ರಾಮದ ರೈತರಲ್ಲಿ ಈ ವರ್ಷದ ಮುಂಗಾರು ಮಳೆ ಹರ್ಷ ತಂದಿದೆ. ಹವಾಮಾನ ವೈಪರಿತ್ಯ, ಸಕಾಲಕ್ಕೆ ಬಾರದ ಮಳೆಯಿಂದ ಬೇಸತ್ತ ರೈತರು ದಶಕಗಳಿಂದ ಭತ್ತ ನಾಟಿ ಮಾಡುವುದನ್ನೆ ನಿಲ್ಲಿಸಿದ್ದರು.</p>.<p>ಕಲ್ಯಾಣ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಜನ ಮದುವೆ, ಶುಭ ಕಾರ್ಯ, ಸಭೆ ಸಮಾರಂಭಗಳಿಗೆ ಇಲ್ಲಿಗೆ ಬಂದು ಭತ್ತ ಖರಿದಿಸುತ್ತಿದ್ದ ಕಾಲವೊಂದಿತ್ತು. ಆದರೆ ಭತ್ತದ ಬೆಳೆಗೆ ಬೇಕಾಗುವಷ್ಟು ಮಳೆ ಆಗದಕ್ಕೆ ಕಳೆದ 10-12 ವರ್ಷಗಳಿಂದ ಗ್ರಾಮದ ರೈತರು ಭತ್ತ ನಾಟಿ ಮಾಡುವ ಸಾಹಸಕ್ಕೆ ಮುಂದಾಗಿರಲಿಲ್ಲ, ಈ ವರ್ಷದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಉತ್ತಮವಾಗಿ ಬರುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭತ್ತ ನಾಟಿ ಕಾರ್ಯ ಭರದಿಂದ ಸಾಗಿದೆ.</p>.<p>ಭತ್ತ ನಾಟಿ ಮಾಡಲು ಬೀಜ ಹಾಕಿದ್ದು ಸಸಿಗಳು ಫಲವತ್ತಾಗಿ ಬೆಳೆದಿವೆ, ಹೀಗಾಗಿ ಬಹುತೇಕ ರೈತರು ನಾಟಿ ಕಾರ್ಯ ಆರಂಭಿಸಿದ್ದಾರೆ.</p>.<p>‘ಹಲವು ವರ್ಷಗಳಿಂದ ಭತ್ತದ ಬೆಳೆಯಿಂದ ವಂಚಿತರಾಗಿದ್ದ ನಮಗೆ ಈ ಹಂಗಾಮಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಒಳ್ಳೆಯ ಫಸಲು ಪಡೆಯುವ ನಿಟ್ಟಿನಲ್ಲಿ ಭೂತಾಯಿಯನ್ನು ನಂಬಿ ಭತ್ತ ನಾಟಿಗೆ ಅಣಿಯಾಗಿದ್ದೆವೆʼ ಎಂದು ಗ್ರಾಮದ ರೈತ ರಾಮಪ್ಪ ‘ಪ್ರಜಾವಾಣಿʼಗೆ ತಿಳಿಸಿದರು.</p>.<p>‘ಭತ್ತ ನಾಟಿ ಮಾಡಲು ಕೃಷಿ ಕಾರ್ಮಿಕರ ಕೂಲಿ ಹೆಚ್ಚಾಗಿದೆ, ಕೇವಲ ಮಳೆಯನ್ನು ಆಧಾರವಾಗಿಟ್ಟುಕೊಂಡು ಮುಂದಿನ ಫಸಲು ಬರುವವರೆಗಿನ ಸವಾಲುಗಳು ಎದುರಿಸಲು ಗಟ್ಟಿ ನಿರ್ಧಾರ ಮಾಡಿ ನಾಟಿ ಕಾರ್ಯ ಆರಂಭಿಸಲಾಗಿದೆ’ ಎಂದು ರೈತ ಮಲ್ಲಪ್ಪ ನುಡಿಯುತ್ತಾರೆ.</p>.<p>ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳ ಬೆಲೆಯೂ ಹೆಚ್ಚಾಗಿದೆ, ಫಸಲು ಬಂದ ಮೇಲೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಲಭಿಸಿದಾಗ ಮಾತ್ರ ಭತ್ತ ಬೆಳೆದ ರೈತರ ಬದುಕು ಹಸನಾಗುತ್ತದೆ. ದಶಕದ ಕನಸು ನನಸಾಗುತ್ತದೆ, ಮತ್ತೆ ದೂರ ದೂರದ ಜನ ಗ್ರಾಮಕ್ಕೆ ಬಂದು ಭತ್ತ ಖರಿದಿಸುತ್ತಾರೆ. </p>.<div><blockquote>ನಾಟಿ ಮಾಡಿದ ಭತ್ತದ ಫಸಲು ರೈತರ ಕೈಗೆ ಬರಲು ಕೊನೆಯವರೆಗೂ ಮಳೆರಾಯನ ಕೃಪೆ ಹಿಗೆಯೇ ಇರಬೇಕಾಗುತ್ತದೆ. ಹೀಗಾಗಿ ಭತ್ತದ ಬೆಳೆ ಬಿಸಿ ತುಪ್ಪದಂತಿದೆ.</blockquote><span class="attribution">ಸುಭಾಷ ಕುಂಬಾರ್, ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>