ಜಿಲ್ಲೆಯ ಕಮನಗರ ರೈಲು ನಿಲ್ದಾಣದಲ್ಲಿ ಯಶವಂತಪುರ-ಲಾತೂರ, ಲಾತೂರ-ಯಶವಂತಪುರ ರೈಲು ನಿಲುಗಡೆಯಾಗಬೇಕು. ನಾಂದೇಡ್-ಬೆಂಗಳೂರು ಲಿಂಕ್ ಎಕ್ಸ್ಪ್ರೆಸ್ ರೈಲನ್ನು ಈ ಹಿಂದೆ ಕಮಲನಗರ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಕೋವಿಡ್ ನಂತರ ರದ್ದುಪಡಿಸಲಾಗಿದೆ. ಯಶವಂತಪುರ-ಲಾತೂರ, ಲಾತೂರ-ಯಶವಂತಪುರ ಹಾಗೂ ಬೀದರ್ ಮೂಲಕ ಶಿರಡಿಗೆ ತೆರಳುವ ಎಲ್ಲ ರೈಲುಗಳು ಕಮಲನಗರದಲ್ಲಿ ನಿಲುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.