ಚಿಟಗುಪ್ಪ: ‘ಸಮಾಜದಲ್ಲಿ ನಡೆಯುತ್ತಿರುವ ಬಾಲ ದೌರ್ಜನ್ಯಗಳ ತಡೆಗೆ ಮಕ್ಕಳ ಹಕ್ಕುಗಳ ಬಗ್ಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯ ಹೆಚ್ಚಾಗಬೇಕು’ ಎಂದು ಹುಮನಾಬಾದ್ನ ಆರ್ಬಿಟ್ ಸಂಸ್ಥೆ ಸಿಬ್ಬಂದಿ ಕಂಟಿ ಅವರು ಹೇಳಿದರು.
ತಾಲ್ಲೂಕಿನ ನಿರ್ಣಾ ವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಕಷ್ಟದಲ್ಲಿರುವಮಕ್ಕಳಿಗೆ ನೇರ ವಾಗಿಲು ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಬೇಕು. ಇದದು ಉಚಿತ ಕರೆಯ ಸಂಖ್ಯೆಯಾಗಿದೆ. ಎಂತಹುದೆ ಪರಿಸ್ಥಿತಿಯಲ್ಲಿ ಧೈರ್ಯ ಕಳೆದುಕೊಳ್ಳಬಾರದು. ಆತ್ಮ ವಿಶ್ವಾಸದಿಂದ ಸಮಸ್ಯೆ ಎದುರಿಸುವ ಮನೋಭಾವ ಬೆಳೆಸಿಕೊಳ್ಳಿ’ ಎಂದರು.
ಮಕ್ಕಳಿಗೆ ಕೆಲವು ಮಾದರಿಗಳ ಪ್ರದರ್ಶನ ನೀಡಿ, ಸಮಸ್ಯೆಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡ ಲಾಯಿತು. ಶಾಲಾ ಸಿಬ್ಬಂದಿ, ಮೇಲು ಸ್ತುವಾರಿ ಸಮಿತಿ ಸದಸ್ಯರು ಇದ್ದರು.