ಜನವಾಡ: ಮಕ್ಕಳ ಹಕ್ಕು ಉತ್ಸವದ ಅಂಗವಾಗಿ ಡಾನ್ ಬಾಸ್ಕೊ ಸ್ವಯಂ ಸೇವಾ ಸಂಸ್ಥೆಯಿಂದ ಬೀದರ್ನ ಗುರುದ್ವಾರ ರಿಂಗ್ ರಸ್ತೆ ಸಮೀಪದಿಂದ ಚಿಕ್ಕಪೇಟೆಯ ಸಂಸ್ಥೆಯ ಕಚೇರಿವರೆಗೆ ಮಕ್ಕಳ ಹಕ್ಕುಗಳ ಜಾಗೃತಿ ಜಾಥಾ ನಡೆಯಿತು.
ನ್ಯೂಟೌನ್ ಸಿಪಿಐ ಕಪಿಲ್ದೇವ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ ಜಿಲ್ಲೆಯ ಆಯ್ದ 30 ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಕ್ಕಳ ಉತ್ಸವ: ಸಂಸ್ಥೆಯಲ್ಲಿ ನಡೆದ ಮಕ್ಕಳ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಫಾದರ್ ಅಲೋಸಿಯಸ್ ಸಾಂಟಿಯಾಗೊ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀನಿವಾಸ ಬಾಳುವಾಲೆ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಜಿಯಾ ಬಳಬಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಂತೇಶ ಭಜಂತ್ರಿ, ಮಾಣಿಕರಾವ್ ಪವಾರ್, ಬಿಆರ್ಪಿ ತಾನಾಜಿ ಇದ್ದರು.
ಸಮಾರೋಪ ಸಮಾರಂಭದಲ್ಲಿ ಶಾಸಕ ರಹೀಂಖಾನ್, ಜನವಾಡ ಪಿಡಿಒ ಶತಕುಮಾರ ಅಭಿಮಾನ, ನಗರಸಭೆ ಸದಸ್ಯ ಎಂ.ಡಿ.ಗೌಸ್, ಪ್ರಾಚಾರ್ಯ ಫಾದರ್ ಪ್ರವೀಣ ಕೆ.ಜೆ, ಆಡಳಿತಾಧಿಕಾರಿ ಫಾದರ್ ಮ್ಯಾಥಿವ್ ಹಾಗೂ ಅವಿನಾಶ ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.