ಬಸವಕಲ್ಯಾಣ: ‘ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಲ್ಲ ಜಾತಿ, ಧರ್ಮದವರ ಮತ ಪಡೆಯುವ ವಿಶ್ವಾಸವಿದೆ’ ಎಂದು ಮಾಜಿ ಶಾಸಕ ಎಂ.ಜಿ.ಮುಳೆ ಹೇಳಿದರು.
ಇಲ್ಲಿನ ಉಪ ಚುನಾವಣೆಯ ಎನ್.ಸಿ.ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಅವರು ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
‘ಬಿಜೆಪಿಯಿಂದ ಮರಾಠಾ ನಿಗಮಕ್ಕೆ ಅಧ್ಯಕ್ಷರ ನೇಮಕಾತಿ ಆಗಿಲ್ಲ. ಸಮಾಜವನ್ನು 2 ಎ ಪ್ರವರ್ಗಕ್ಕೆ ಸೇರ್ಪಡೆ ಮಾಡದ ಕಾರಣ ಸರ್ಕಾರದ ಬಗ್ಗೆ ಸಮುದಾಯದವರಲ್ಲಿ ರೋಷವಿದೆ’ ಎಂದು ಹೇಳಿದರು.
ಎನ್.ಸಿ.ಪಿ ರಾಜ್ಯ ಘಟಕದ ಅಧ್ಯಕ್ಷ ತಿಲಕ ನಂಬಿಯಾರ್, ಕಾರ್ಯದರ್ಶಿ ರಾಮಭಾವು ಜಾಧವ, ತಾಲ್ಲೂಕು ಘಟಕದ ಅಧ್ಯಕ್ಷ ನಾಮ ಜಾನಾಪುರಕರ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೀರ ವಾರೀಸ್ ಅಲಿ, ತಾತೇರಾವ್ ಪಾಟೀಲ, ದಿಲೀಪ ಶಿರೂರಿ, ಸಂಭಾಜಿ ಜಗತಾಪ ಪಾಲ್ಗೊಂಡಿದ್ದರು.