ಬೀದರ್: ತಾಲ್ಲೂಕಿನ ಕೊಳಾರ(ಬಿ) ಗ್ರಾಮದ ವಿಜಯಕುಮಾರ ಕೃಷ್ಣಪ್ಪ ಅವರ ಕಳುವಾದ ಹೊಂಡಾ ಶೈನ್ ಬೈಕ್ನ್ನು ಪೊಲೀಸರು 48 ಗಂಟೆಗಳಲ್ಲೇ ಪತ್ತೆ ಹಚ್ಚಿದ್ದಾರೆ.
ಮಾರ್ಕೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ನಗರದ ಚಿದ್ರಿ ವೃತ್ತ ಸಮೀಪ ಬೈಕ್ ಪತ್ತೆ ಮಾಡಿದ್ದಾರೆ.
ಪ್ರಕರಣದ ಸಂಬಂಧ ನಗರದ ಕಲೀಮ್ ಅಬ್ದುಲ್ ಖಾದರಸಾಬ, ಅಕ್ಬರ್ ಎಂ.ಡಿ. ಸಿದ್ದಿಕ್ ಹಾಗೂ ಅಸ್ಲಾಂ ಅಬ್ದುಲ್ ಖಾದರಸಾಬ ಎಂಬುವವರನ್ನು ಬಂಧಿಸಿದ್ದಾರೆ.
ಆರೋಪಿಗಳು ಗಾಂಧಿಗಂಜ್, ಬೀದರ್ ನಗರ ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಇತರ ಕಡೆಗಳಲ್ಲಿ ಕಳವು ಮಾಡಿದ್ದ ₹ 4.06 ಲಕ್ಷ ಮೌಲ್ಯದ ಒಟ್ಟು 9 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಮಾರ್ಕೇಟ್ ಸಿಪಿಐ ಮಲ್ಲಮ್ಮ ಚೌಬೆ ಅವರ ನೇತೃತ್ವದ ತಂಡ ಪ್ರಕರಣ ಭೇದಿಸಿದೆ.