ಕಲ್ಯಾಣ ಕರ್ನಾಟಕ ಉತ್ಸವ ಒಂದು ಜಿಲ್ಲೆಗೆ ಸೀಮಿತವಾಗಬಾರದು. ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜನಪದ ಸಂಸ್ಕೃತಿಯನ್ನೂ ಬಿಂಬಿಸುವಂತಿರಬೇಕು. ಉತ್ಸವ ಕೇವಲ ಕಲಬುರಗಿ ಜಿಲ್ಲೆಗೆ ಸೀಮಿತವಾದರೆ, ಉಳಿದ 6 ಜಿಲ್ಲೆಗಳ ಕಲಾವಿದರನ್ನು ಕಡೆಗಣಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.