ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಈ ಊರು ಗ್ರಾಮ ಪಂಚಾತಿ ಕೇಂದ್ರವೂ ಆಗಿದೆ. ಆದರೆ ಇಲ್ಲಿ ಸಮಸ್ಯೆಗೆ ಮಾತ್ರ ಯಾವುದೇ ಕೊರತೆ ಇಲ್ಲ. ಗ್ರಾಮಸ್ಥರ ಹೋರಾಟದ ಫಲವಾಗಿ ಈ ಊರಿಗೆ ಒಂದೂವರೆ ವರ್ಷದ ಹಿಂದೆ ಶುದ್ಧ ನೀರಿನ ಘಟಕ ಮಂಜೂರಾಗಿದೆ. ಜನ ಖುಷಿಯಿಂದ ನೀರು ಸಹ ಕುಡಿದರು. ಆದರೆ ಆ ಖುಷಿ ಎರಡು ತಿಂಗಳಿಗೆ ಮಾತ್ರ ಸೀಮಿತವಾಯಿತು. ಕೆಟ್ಟು ಹೋದ ಶುದ್ಧ ನೀರಿನ ಘಟಕ ಇಂದಿಗೂ ದುರಸ್ತಿಯಾಗಿಲ್ಲ. ಹೀಗಾಗಿ ಜನ ಈಗಲೂ ತೆರೆದ ಬಾವಿ ನೀರು ಕುಡಿಯಬೇಕಾಗಿದೆ.