ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಮಾತನಾಡಿ, ‘ಮೊಬೈಲ್ ಗೀಳು ಆರೋಗ್ಯಕರ ಜೀವನಶೈಲಿಗೆ ಅಪಾಯಕಾರಿವಾಗಿ ಪರಿಣಮಿಸಿದೆ. ದೇಹ ಹಾಗೂ ದೇಶದ ಭವಿಷ್ಯಕ್ಕೂ ಗಂಡಾಂತರ ತಂದೊಡ್ಡಿದೆ. ಹೀಗಾಗಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ವ್ಯಾಯಾಮ ಹಾಗೂ ಯೋಗ ಮಾಡಲು ಯುವಕರು ಸಂಕಲ್ಪ ಮಾಡಬೇಕು’ ಎಂದು ಹೇಳಿದರು;
ಕರ್ನಲ್ ಸುಶೀಲಕುಮಾರ ತಿವಾರಿ, ಕರ್ನಲ್ ಸಂದೀಪ ಜನಪಾತ್, ತಹಶೀಲ್ದಾರ್ ಗಂಗಾದೇವಿ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ದೀಪಕ, ಪ್ರಭುಲಿಂಗ ಬಿರಾದಾರ, ಮೇಜರ್ ಪಿ. ವಿಠಲ ರೆಡ್ಡಿ, ಬಾಬು ವಾಲಿ ಹಾಗೂ ಡಾ.ಗೌತಮ ಅರಳಿ ಇದ್ದರು.