ಹುಮನಾಬಾದ್: ಸಮೀಪದ ಮಾಣಿಕನಗರದ ಮಾಣಿಕಪ್ರಭುಗಳ 154ನೇ ಪುಣ್ಯತಿಥಿ ಹಾಗೂ 202ನೇ ಶ್ರೀಪ್ರಭು ಅವತಾರ ಜಯಂತಿ ಮಹೋತ್ಸವ ಡಿ.6ರಿಂದ 14ರವರೆಗೆ ನಡೆಯಲಿದೆ ಎಂದು ಮಾಣಿಕಪ್ರಭು ಸಂಸ್ಥಾನ ಕಾರ್ಯದರ್ಶಿ ಆನಂದರಾಜ ಮಾಣಿಕಪ್ರಭುಗಳು ತಿಳಿಸಿದರು.
ತಾಲ್ಲೂಕಿನ ಮಾಣಿಕನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಡಿ.6 ರಂದು ಮಧಾಹ್ನ 3 ಗಂಟೆಗೆ ತೀರ್ಥಸ್ನಾನ ಹಾಗೂ ಯೋಗ ದಂಡ ಪೂಜೆಯೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭಗೊಳ್ಳಲಿದೆ.
ಡಿ.7 ರಂದು ಗಣಪತಿ ಪೂಜೆ, ಚಂಡಿ ಪಾಠ, ಸಕಲದೇವತಾ ನಿಮಂತ್ರಣ, 8 ರಂದು 150ನೇ ಪ್ರಭುಗಳ ಪುಣ್ಯತಿಥಿ, 9 ರಂದು ದ್ವಾದಶಿ, ಸಂಗಮ ಸ್ನಾನ. 10 ರಂದು ದಕ್ಷಿಣ ದರ್ಬಾರ್ 11ರಂದು ಗುರು ಪೂಜನ್, ಶ್ರೀಮಾಣಿಕ ಪೌರ್ಣಿಮಾ ಪರ್ವ. 12 ರಂದು 202ನೇ ಪ್ರಭು ಜಯಂತಿ, 13 ರಂದು ಪ್ರಭು ದರ್ಬಾರ್ ನಡೆಯಲಿದೆ.
ಮಧ್ಯರಾತ್ರಿ 12.30ಕ್ಕೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸಂಗೀತ ಕಲಾವಿದರು ಕಲಾ ಪ್ರದರ್ಶನ ನೀಡಲಿದ್ದಾರೆ. 14 ರಂದು ಶೋಭಾ ಯಾತ್ರೆ ಜರುಗಲಿದೆ ಎಂದು ಮಾಹಿತಿ ನೀಡಿದರು.
ಸಂಸ್ಥಾನದ ಸಹ ಕಾರ್ಯದರ್ಶಿ ಚೈತನ್ಯರಾಜ ಪ್ರಭು, ವಸಂತ ನಾಯಕ, ಮಹಾದೇವ ಜಲಸಿಂಗಿ ಹಾಗೂ ಕಿರಣ ತಗಡಕರ್ ಇದ್ದರು.