ಕೊರೊನಾ, ಅತಿವೃಷ್ಟಿಯಿಂದ ಜನ ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಸದ್ಯ ಬಹಿರಂಗ ಚರ್ಚೆಗಿಂತ ಜನರ ನೆರವಿಗೆ ಧಾವಿಸುವುದು ಹೆಚ್ಚು ಅವಶ್ಯಕವಾಗಿದೆ. ಕಾರಣ, ಖಂಡ್ರೆ ಮತ್ತು ಖೂಬಾ ಅವರು ಪರಸ್ಪರ ವೈಮನಸ್ಸು ತೊರೆದು ಒಂದಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ದೊಕಿಸಿಕೊಡುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು. ಜನಹಿತದ ಕಾರ್ಯಗಳೊಂದಿಗೆ ಸಮಾಜದ ಸಂಘಟನೆ ಬಲಪಡಿಸುವ ಕಾರ್ಯವನ್ನೂ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.