‘ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಪರಮೇಶ್ವರ, ದೇವೇಗೌಡರು ಎಲ್ಲರೂ ಅಧಿಕಾರ ನಡೆಸುತ್ತಿದ್ದಾರೆ. ನಿಜವಾಗಿ ಯಾರು ಅಧಿಕಾರ ನಡೆಸುತ್ತಿದ್ದಾರೆ ಎನ್ನುವ ಗೊಂದಲ ಇದೆ’ ಎಂದು ತಿಳಿಸಿದರು
‘ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ. ಜನರ ಸೇವೆ ಮಾಡುವ ಉದ್ದೇಶದಿಂದ ಏಪ್ರಿಲ್ 4 ರಂದು ಬಿಜೆಪಿ ಸೇರಿದ್ದೇನೆ. ನಾನು ಬೀದರ್ ಉಪ ವಿಭಾಗಾಧಿಕಾರಿಯಾಗಿದ್ದಾಗ ಔರಾದ್ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಕೊಳವೆಬಾವಿ ಕೊರೆದು ಜನರಿಗೆ ನೀರು ಕೊಟ್ಟೆ. ಇದು ನನ್ನ ಸಾಧನೆ’ ಎಂದು ಹೇಳಿದರು.