ಆಕಾಶವಾಣಿ ಕಲಾವಿದ ಮಲ್ಲಿಕಾರ್ಜುನ ಸ್ವಾಮಿ, ಸಂಗೀತ ಶಿಕ್ಷಕಿ ತ್ರಿವೇಣಿ ಮಠಪತಿ, ಪ್ರಾಚಾರ್ಯ ಚೆನ್ನಬಸವ ಹೇಡೆ ನೇತೃತ್ವದಲ್ಲಿ ರಾಷ್ಟ್ರ ಕವಿ ಕುವೆಂಪುರವರ ನಾಡಗೀತೆ ಮತ್ತು ಬಾರಿಸು ಕನ್ನಡ ಡಿಂಡಿಮವ, ಕವಿ ನಿಸಾರ್ಅಹ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ, ಖ್ಯಾತ ನಿರ್ದೇಶಕ ಹಂಸಲೇಖರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಕನ್ನಡ ಗೀತ ಗಾಯನ ನಡೆಯಿತು.ಇದೇ ಸಂದರ್ಭದಲ್ಲಿ ಕನ್ನಡ ಬಳಕೆಯ ಸಂಕಲ್ಪ ಪ್ರತಿಜ್ಞಾ ವಿಧಿ ನಡೆಸಿಕೊಟ್ಟರು. ಶ್ರೀಕಾಂತ ರಾಜಗೀರಾ, ಮಾರುತಿ ಸುಂಕಾ, ಸಿದ್ಧಲಿಂಗಯ್ಯ, ಸುವರ್ಣಾ, ಶ್ರಾವಂತಿ , ಹಾರಿಕಾ, ಶ್ರೀಕಾಂತ ಭೋಸ್ಲೆ, ಸುಮಿತ ಗಾಯಕವಾಡ, ಮಾಣಿಕ ಸಾಗರ, ಸವಿತಾ ಕಲ್ಲೂರ, ವಸಂತ ರಾಠೋಡ, ಸುಭಾಷ, ನರಸಪ್ಪ ಇದ್ದರು.