<p><strong>ಹುಮನಾಬಾದ್</strong>: ರಾಷ್ಟ್ರೀಯ ಹೆದ್ದಾರಿ 65ಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಕಪ್ಪರಗಾಂವ್ ಗ್ರಾಮ ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ.</p>.<p>ನಂದಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಹಳೆ ಮತ್ತು ಹೊಸ ಬಡಾವಣೆ ಸೇರಿ 7 ಜನ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಗೊಂಡಿದ್ದಾರೆ. 3 ಸಾವಿರ ಜನಸಂಖ್ಯೆ ಹೊಂದಿರುವ ಇಲ್ಲಿ 600ಕ್ಕೂ ಅಧಿಕ ಮನೆಗಳಿವೆ.</p>.<p>ಗ್ರಾಮದಲ್ಲಿ ದಶಕದ ಹಿಂದೆ ನಿರ್ಮಿಸಲಾಗಿರುವ ಚರಂಡಿಗಳಿದ್ದು, ಹೂಳು ತುಂಬಿವೆ. ಕೆಲವು ಚರಂಡಿಗಳು ನಿರ್ವಹಣೆ ಕೊರತೆಯಿಂದ ಮುಚ್ಚಿಹೋಗಿವೆ. ಗ್ರಾಮ ಪ್ರವೇಶಿಸಿದರೆ ರಸ್ತೆ ಮತ್ತು ಚರಂಡಿ ಮಧ್ಯೆ ವ್ಯತ್ಯಾಸ ಗೊತ್ತಾಗದಷ್ಟು ಪರಿಸ್ಥಿತಿ ಹದಗೆಟ್ಟಿದೆ.</p>.<p>ವರ್ಷಕ್ಕೆ ಎರಡು ಬಾರಿ ಸ್ವಚ್ಛಗೊಳಿಸಿದರೂ ಬಹುತೇಕ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ ಗ್ರಾಮದ ಇಸ್ಮಾಯಿಲ್.</p>.<p>ವಾರ್ಡ್ ಸಂಖ್ಯೆ 1ಮತ್ತು 2ರಲ್ಲಿ ಕಳಪೆ ಪೈಪ್ಲೈನ್ ಕಾರಣ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಮಳೆಗಾಲ ಬಂದರೆ ತ್ಯಾಜ್ಯದಿಂದ ರೋಗಭೀತಿ ಕಾಡುತ್ತದೆ. ಸೊಳ್ಳೆ ಕಡಿದು ವಿವಿಧ ರೀತಿ ಕಾಯಿಲೆ ಬರುತ್ತವೆ. ಗ್ರಾಮದಲ್ಲಿ 7 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಸಮಸ್ಯೆಗೆ ಸ್ಪಂದಿಸುವವರು ಯಾರೂ ಇಲ್ಲ ಎಂದು ನಿವಾಸಿ ಕಮಲಾಬಾರಿ ಅಕ್ಕರೆಡ್ಡಿ ದೂರಿದರು.</p>.<p>ರಾಷ್ಟ್ರೀಯ ಹೆದ್ದಾರಿ ನಮ್ಮೂರ ಸಮೀಪ ಹಾದು ಹೋಗಿದೆ. ಕಾಮಗಾರಿ ಕೈಗೊಂಡ ಎಲ್.ಎನ್.ಟಿ ಕಂಪೆನಿ 2 ವರ್ಷದಿಂದ ರಸ್ತೆ ಬದಿ ಚರಂಡಿ ನಿರ್ಮಿಸುವುದಾಗಿ ಹೇಳಿದರೂ ಕಾಲಹರಣ ಮಾಡುತ್ತಿದೆ. ಹೆದ್ದಾರಿಗೆ ಹೊಂದಿಕೊಂಡು ಸರ್ಕಾರಿ ಶಾಲೆ ಇದೆ. ಮಕ್ಕಳು ರಸ್ತೆ ದಾಟುವುದು ಕಷ್ಟ. ಶಾಲೆ ಎದುರಿಗೆ ಸ್ಪೀಡ್ಬ್ರೆಕರ್ ಅಳವಡಿಸಬೇಕು ಎಂದು ನಜೀರ್ಸಾಬ್ ಆಗ್ರಹಿಸಿದರು.</p>.<p>ಗ್ರಾಮದ ಶೇ 50ರಷ್ಟು ಮನೆಗಳಲ್ಲಿ ಈಗಲೂ ಶೌಚಾಲಯಗಳಿಲ್ಲ. ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ದೀಪ ಅಳವಡಿಸಿಲ್ಲ. ಸ್ವಚ್ಛತೆ ಕೊರತೆ ಕಾರಣ ಓಣಿಗಳಲ್ಲಿ ವಿಷ ಜಂತುಗಳ ಕಾಟವಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.<br />ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಗ್ರಾಮಸ್ಥರ ಆರೋಪ ತಳ್ಳಿ ಹಾಕುವಂತಿಲ್ಲ.</p>.<p>ಗ್ರಾಮ ಪಂಚಾಯಿತಿಗೆಿ 13ನೇ ಹಣಕಾಸು ಯೋಜನೆ ಬಿಟ್ಟರೆ ಬೇರೆ ಅನುದಾನವಿಲ್ಲ. ಈ ಅನುದಾನವನ್ನು ಕುಡಿಯುವ ನೀರಿಗಾಗಿ ಬಳಸುತ್ತೇವೆ. ಸಮಸ್ಯೆ ಇರುವುದು ನಿಜ. ಆದರೆ ಪರಿಹಾರ ನಮ್ಮ ವ್ಯಾಪ್ತಿ ಮೀರಿದೆ. ರಸ್ತೆ, ಚರಂಡಿ ನಿರ್ಮಾಣಕ್ಕೆ ಕೋಟ್ಯಂತರ ಅನುದಾನ ಅಗತ್ಯ. ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಶಾಸಕರ ಅನುದಾನ ಅಗತ್ಯ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಭೀಮಶಾ.</p>.<p>13ನೇ ಹಣಕಾಸು ಅನುದಾನ ಹೊರತುಪಡಿಸಿ ಬೇರೆ ಆದಾಯ ಲಭ್ಯವಿಲ್ಲದ ಕಾರಣ ರಸ್ತೆ, ಚರಂಡಿ ನಿರ್ಮಿಸಲಾಗಿಲ್ಲ.<br /><strong>– ಭೀಮಶಾ, ಪಿಡಿಒ, ನಂದಗಾಂವ್ ಗ್ರಾಮ ಪಂಚಾಯಿತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್</strong>: ರಾಷ್ಟ್ರೀಯ ಹೆದ್ದಾರಿ 65ಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಕಪ್ಪರಗಾಂವ್ ಗ್ರಾಮ ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ.</p>.<p>ನಂದಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಹಳೆ ಮತ್ತು ಹೊಸ ಬಡಾವಣೆ ಸೇರಿ 7 ಜನ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಗೊಂಡಿದ್ದಾರೆ. 3 ಸಾವಿರ ಜನಸಂಖ್ಯೆ ಹೊಂದಿರುವ ಇಲ್ಲಿ 600ಕ್ಕೂ ಅಧಿಕ ಮನೆಗಳಿವೆ.</p>.<p>ಗ್ರಾಮದಲ್ಲಿ ದಶಕದ ಹಿಂದೆ ನಿರ್ಮಿಸಲಾಗಿರುವ ಚರಂಡಿಗಳಿದ್ದು, ಹೂಳು ತುಂಬಿವೆ. ಕೆಲವು ಚರಂಡಿಗಳು ನಿರ್ವಹಣೆ ಕೊರತೆಯಿಂದ ಮುಚ್ಚಿಹೋಗಿವೆ. ಗ್ರಾಮ ಪ್ರವೇಶಿಸಿದರೆ ರಸ್ತೆ ಮತ್ತು ಚರಂಡಿ ಮಧ್ಯೆ ವ್ಯತ್ಯಾಸ ಗೊತ್ತಾಗದಷ್ಟು ಪರಿಸ್ಥಿತಿ ಹದಗೆಟ್ಟಿದೆ.</p>.<p>ವರ್ಷಕ್ಕೆ ಎರಡು ಬಾರಿ ಸ್ವಚ್ಛಗೊಳಿಸಿದರೂ ಬಹುತೇಕ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ ಗ್ರಾಮದ ಇಸ್ಮಾಯಿಲ್.</p>.<p>ವಾರ್ಡ್ ಸಂಖ್ಯೆ 1ಮತ್ತು 2ರಲ್ಲಿ ಕಳಪೆ ಪೈಪ್ಲೈನ್ ಕಾರಣ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಮಳೆಗಾಲ ಬಂದರೆ ತ್ಯಾಜ್ಯದಿಂದ ರೋಗಭೀತಿ ಕಾಡುತ್ತದೆ. ಸೊಳ್ಳೆ ಕಡಿದು ವಿವಿಧ ರೀತಿ ಕಾಯಿಲೆ ಬರುತ್ತವೆ. ಗ್ರಾಮದಲ್ಲಿ 7 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಸಮಸ್ಯೆಗೆ ಸ್ಪಂದಿಸುವವರು ಯಾರೂ ಇಲ್ಲ ಎಂದು ನಿವಾಸಿ ಕಮಲಾಬಾರಿ ಅಕ್ಕರೆಡ್ಡಿ ದೂರಿದರು.</p>.<p>ರಾಷ್ಟ್ರೀಯ ಹೆದ್ದಾರಿ ನಮ್ಮೂರ ಸಮೀಪ ಹಾದು ಹೋಗಿದೆ. ಕಾಮಗಾರಿ ಕೈಗೊಂಡ ಎಲ್.ಎನ್.ಟಿ ಕಂಪೆನಿ 2 ವರ್ಷದಿಂದ ರಸ್ತೆ ಬದಿ ಚರಂಡಿ ನಿರ್ಮಿಸುವುದಾಗಿ ಹೇಳಿದರೂ ಕಾಲಹರಣ ಮಾಡುತ್ತಿದೆ. ಹೆದ್ದಾರಿಗೆ ಹೊಂದಿಕೊಂಡು ಸರ್ಕಾರಿ ಶಾಲೆ ಇದೆ. ಮಕ್ಕಳು ರಸ್ತೆ ದಾಟುವುದು ಕಷ್ಟ. ಶಾಲೆ ಎದುರಿಗೆ ಸ್ಪೀಡ್ಬ್ರೆಕರ್ ಅಳವಡಿಸಬೇಕು ಎಂದು ನಜೀರ್ಸಾಬ್ ಆಗ್ರಹಿಸಿದರು.</p>.<p>ಗ್ರಾಮದ ಶೇ 50ರಷ್ಟು ಮನೆಗಳಲ್ಲಿ ಈಗಲೂ ಶೌಚಾಲಯಗಳಿಲ್ಲ. ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ದೀಪ ಅಳವಡಿಸಿಲ್ಲ. ಸ್ವಚ್ಛತೆ ಕೊರತೆ ಕಾರಣ ಓಣಿಗಳಲ್ಲಿ ವಿಷ ಜಂತುಗಳ ಕಾಟವಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.<br />ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಗ್ರಾಮಸ್ಥರ ಆರೋಪ ತಳ್ಳಿ ಹಾಕುವಂತಿಲ್ಲ.</p>.<p>ಗ್ರಾಮ ಪಂಚಾಯಿತಿಗೆಿ 13ನೇ ಹಣಕಾಸು ಯೋಜನೆ ಬಿಟ್ಟರೆ ಬೇರೆ ಅನುದಾನವಿಲ್ಲ. ಈ ಅನುದಾನವನ್ನು ಕುಡಿಯುವ ನೀರಿಗಾಗಿ ಬಳಸುತ್ತೇವೆ. ಸಮಸ್ಯೆ ಇರುವುದು ನಿಜ. ಆದರೆ ಪರಿಹಾರ ನಮ್ಮ ವ್ಯಾಪ್ತಿ ಮೀರಿದೆ. ರಸ್ತೆ, ಚರಂಡಿ ನಿರ್ಮಾಣಕ್ಕೆ ಕೋಟ್ಯಂತರ ಅನುದಾನ ಅಗತ್ಯ. ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಶಾಸಕರ ಅನುದಾನ ಅಗತ್ಯ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಭೀಮಶಾ.</p>.<p>13ನೇ ಹಣಕಾಸು ಅನುದಾನ ಹೊರತುಪಡಿಸಿ ಬೇರೆ ಆದಾಯ ಲಭ್ಯವಿಲ್ಲದ ಕಾರಣ ರಸ್ತೆ, ಚರಂಡಿ ನಿರ್ಮಿಸಲಾಗಿಲ್ಲ.<br /><strong>– ಭೀಮಶಾ, ಪಿಡಿಒ, ನಂದಗಾಂವ್ ಗ್ರಾಮ ಪಂಚಾಯಿತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>