<p>ಖಟಕಚಿಂಚೋಳಿ: ಇಲ್ಲಿಯ ವೀರಮಹಾಂತೇಶ್ವರ ಮಠದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ವೀರಮಹಾಂತೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ಮಾಡಲಾಯಿತು.</p>.<p>ಪವಾಡ ಪುರುಷ ವೀರಮಹಾಂತೇಶ್ವರರು ಹಿಂದೆ ಯುಗಾದಿ ಹಬ್ಬದ ದಿನದಂದು ಮಠದಲ್ಲಿಯೇ ಜೀವಂತ ಐಕ್ಯರಾಗಿದ್ದಾರೆ. ಹೀಗಾಗಿ ಪ್ರತಿ ವರ್ಷ ಅವರ ಸ್ಮರಣಾರ್ಥ ಯುಗಾದಿ ಹಬ್ಬದ ದಿನದಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ. ಅದರಂತೆ ಬೆಳಿಗ್ಗೆಯಿಂದಲೇ ವೀರಮಹಾಂತೇಶ್ವರ ಮೂರ್ತಿಗೆ ಹೂ, ಹಣ್ಣುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.</p>.<p>ವೀರ ಮಹಾಂತೇಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ,‘ವೀರಮಹಾಂತೇಶ್ವರ ಮಠವು ಅತ್ಯಂತ ಪುರಾತನವಾಗಿದೆ. ಭಕ್ತರಿಗೆ ಕೇಳಿದ ವರವನ್ನು ನೀಡುವ ಮಠವಾಗಿದೆ. ಹೀಗಾಗಿ ವೀರ ಮಹಾಂತೇಶ್ವರರು ಭಕ್ತರ ಮನದಲ್ಲಿ ಅಚಲವಾಗಿ ಉಳಿದುಕೊಂಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.</p>.<p>ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಗ್ರಾಮಗಳ, ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಭಕ್ತರು ಪಾಲ್ಗೊಂಡಿದ್ದರು.</p>.<p>ಸಂಜುಕುಮಾರ ರಟಕಲೆ, ಕಲ್ಯಾಣರಾವ್ ಉಂಬರಗೆ, ಮಾಣಿಕಪ್ಪ ಚಾಮರಡ್ಡಿ, ಜಗನ್ನಾಥ ಜವಾದೆ, ಪಂಚಾಯಿತಿ ಸದಸ್ಯರಾದ ಆನಂದ ರಟಕಲೆ , ವಿಠ್ಠಲ ಗುನ್ನಾಳೆ, ಸೋಮನಾಥ ರಟಕಲೆ, ಹಣಮಂತ ಬೆಂಗಾ, ರಮೇಶ ಕುರಬಖೇಳಗಿ, ಶಿವಕುಮಾರ ಅಜ್ಜ, ಓಂಕಾರ ಬಿರಾದಾರ, ಶಾಂತಪ್ಪ ಕುಂಬಾರ, ರಾಮಣ್ಣ ಭದ್ರಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖಟಕಚಿಂಚೋಳಿ: ಇಲ್ಲಿಯ ವೀರಮಹಾಂತೇಶ್ವರ ಮಠದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ವೀರಮಹಾಂತೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ಮಾಡಲಾಯಿತು.</p>.<p>ಪವಾಡ ಪುರುಷ ವೀರಮಹಾಂತೇಶ್ವರರು ಹಿಂದೆ ಯುಗಾದಿ ಹಬ್ಬದ ದಿನದಂದು ಮಠದಲ್ಲಿಯೇ ಜೀವಂತ ಐಕ್ಯರಾಗಿದ್ದಾರೆ. ಹೀಗಾಗಿ ಪ್ರತಿ ವರ್ಷ ಅವರ ಸ್ಮರಣಾರ್ಥ ಯುಗಾದಿ ಹಬ್ಬದ ದಿನದಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ. ಅದರಂತೆ ಬೆಳಿಗ್ಗೆಯಿಂದಲೇ ವೀರಮಹಾಂತೇಶ್ವರ ಮೂರ್ತಿಗೆ ಹೂ, ಹಣ್ಣುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.</p>.<p>ವೀರ ಮಹಾಂತೇಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ,‘ವೀರಮಹಾಂತೇಶ್ವರ ಮಠವು ಅತ್ಯಂತ ಪುರಾತನವಾಗಿದೆ. ಭಕ್ತರಿಗೆ ಕೇಳಿದ ವರವನ್ನು ನೀಡುವ ಮಠವಾಗಿದೆ. ಹೀಗಾಗಿ ವೀರ ಮಹಾಂತೇಶ್ವರರು ಭಕ್ತರ ಮನದಲ್ಲಿ ಅಚಲವಾಗಿ ಉಳಿದುಕೊಂಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.</p>.<p>ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಗ್ರಾಮಗಳ, ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಭಕ್ತರು ಪಾಲ್ಗೊಂಡಿದ್ದರು.</p>.<p>ಸಂಜುಕುಮಾರ ರಟಕಲೆ, ಕಲ್ಯಾಣರಾವ್ ಉಂಬರಗೆ, ಮಾಣಿಕಪ್ಪ ಚಾಮರಡ್ಡಿ, ಜಗನ್ನಾಥ ಜವಾದೆ, ಪಂಚಾಯಿತಿ ಸದಸ್ಯರಾದ ಆನಂದ ರಟಕಲೆ , ವಿಠ್ಠಲ ಗುನ್ನಾಳೆ, ಸೋಮನಾಥ ರಟಕಲೆ, ಹಣಮಂತ ಬೆಂಗಾ, ರಮೇಶ ಕುರಬಖೇಳಗಿ, ಶಿವಕುಮಾರ ಅಜ್ಜ, ಓಂಕಾರ ಬಿರಾದಾರ, ಶಾಂತಪ್ಪ ಕುಂಬಾರ, ರಾಮಣ್ಣ ಭದ್ರಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>