ಔರಾದ್: ಇಂಗು ಗುಂಡಿ ನಿರ್ಮಾಣದಿಂದ ತಾಲ್ಲೂಕಿನ ಶೆಂಬೆಳ್ಳಿ ಹಾಗೂ ಲಿಂಗದಳ್ಳಿ ಅರಣ್ಯ ಪ್ರದೇಶಕ್ಕೆ ಜೀವ ಕಳೆ ಬಂದಿದೆ.
ಈ ಅರಣ್ಯ ಪ್ರದೇಶದಲ್ಲಿ ತೋಡಿದ ಒಂದು ಸಾವಿರ ಇಂಗು ಗುಂಡಿಯಿಂದಾಗಿ ಇಡೀ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಅಷ್ಟೇ ಅಲ್ಲ ಸುತ್ತಲಿನ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿ ಹಳೆಯ ಕೊಳವೆ ಬಾವಿ, ತೆರೆದ ಬಾವಿಗಳಿಗೂ ಜೀವ ಕಳೆ ಬಂದಿದೆ. ಕುಡಿಯಲು ನೀರಿಗಾಗಿ ಪರದಾಡುತ್ತಿದ್ದ ನವಿಲು, ಜಿಂಕೆಯಂತಹ ಪ್ರಾಣಿಗಳ ದಾಹ ತೀರಿದೆ.